ADVERTISEMENT

ವಿರಾಜಪೇಟೆ | ಅಂಬೇಡ್ಕರ್ ಭವನದ ತಡೆಗೋಡೆ ಕುಸಿತ: ತನಿಖೆಗೆ ಸೂಚನೆ 

ಸ್ಥಳಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:13 IST
Last Updated 1 ಜೂನ್ 2025, 12:13 IST
ವಿರಾಜಪೇಟೆಗೆ ಭಾನುವಾರ ಭೇಟಿ ನೀಡಿದ ಶಾಸಕ ಎ.ಎಸ್. ಪೊನ್ನಣ್ಣ ಕುಸಿದ ಡಾ. ಅಂಬೇಡ್ಕರ್ ಭವನದ ತಡೆಗೋಡೆಯನ್ನು ವೀಕ್ಷಿಸಿದರು   
ವಿರಾಜಪೇಟೆಗೆ ಭಾನುವಾರ ಭೇಟಿ ನೀಡಿದ ಶಾಸಕ ಎ.ಎಸ್. ಪೊನ್ನಣ್ಣ ಕುಸಿದ ಡಾ. ಅಂಬೇಡ್ಕರ್ ಭವನದ ತಡೆಗೋಡೆಯನ್ನು ವೀಕ್ಷಿಸಿದರು      

ವಿರಾಜಪೇಟೆ: ಮಳೆಗೆ ಕುಸಿದ ಇಲ್ಲಿನ ಡಾ.ಅಂಬೇಡ್ಕರ್ ಭವನದ ತಡೆಗೋಡೆಯನ್ನು ಶಾಸಕ ಎ.ಎಸ್. ಪೊನ್ನಣ್ಣ ಭಾನುವಾರ ಪರಿಶೀಲಿಸಿದರು. 

ಮೊದಲ ಮಳೆಗೆ ಕುಸಿತ ಕಂಡ ತಡೆಗೋಡೆಯನ್ನು ವೀಕ್ಷಿಸಿದ ಪೊನ್ನಣ್ಣ ಕಾಮಗಾರಿಯ ಕುರಿತು ಇಲಾಖೆಯ ಅಧಿಕಾರಿಗಳಿಂದ‌ ಮಾಹಿತಿ ಪಡೆದರು.

‘ಮೇ 20ರಂದು ಮಳೆಯಿಂದಾಗಿ ತಡೆಗೋಡೆ ಕುಸಿದಿದೆ. ವಿಧಾನಪರಿಷತ್ತಿನ ಸದಸ್ಯರ ಹಾಗೂ ಸಂಸದರ ಅನುದಾನದಿಂದ ತಡೆಗೋಡೆ ನಿರ್ಮಾಣವಾಗಿದೆ. ಕಾಮಗಾರಿಯ ಕುರಿತು ಅಧಿಕಾರಿಗಳಲ್ಲಿ ಮಾಹಿತಿಯ ಕೊರತೆ ಇದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಅನಂತ ಶಂಕರ್, ಪುರಸಭೆಯ ಸದಸ್ಯರಾದ ಪಿ.ರಂಜಿ ಪೂಣಚ್ಚ, ಅಬ್ದುಲ್ ಜಲೀಲ್, ವಿ.ಆರ್. ರಜನಿಕಾಂತ್, ಡಾ. ಅಬೇಂಡ್ಕರ್ ಭವನ ನಿರ್ವಹಣಾ ಸಮಿತಿಯ ಸದಸ್ಯ ಎಚ್.ಎಂ. ಮಹದೇವ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.