ಸೋಮವಾರಪೇಟೆ (ಕೊಡಗು): ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದ ಸಮೀಪ ಈದ್ ಉಲ್ ಫಿತ್ರ್ ಮೆರವಣಿಗೆ ಸಾಗುತ್ತಿರುವಾಗ ಕಲ್ಲು ತೂರಾಟ ನಡೆದಿದ್ದು ಪ್ರವೀಣ್ ಅವರಿಗೆ ಸೇರಿದ ಕಾರಿನ ಗಾಜು ಪುಡಿಯಾಗಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ರಂಜಾನ್ ಮಾಸದ ನಂತರ ಬುಧವಾರ ನಡೆಯುತ್ತಿದ್ದ ಈದ್ ಮೆರವಣಿಗೆಯ ವೇಳೆ ನಾಲ್ವರು ಕಿಡಿಗೇಡಿಗಳು ಕಾರಿನ ಕಲ್ಲು ತೂರಿದ್ದಾರೆ. ರಸ್ತೆಪಕ್ಕದಲ್ಲಿ ನಿಲ್ಲಿಸಿದ್ದ ಗಾಂಧಿ ನಗರದ ಪ್ರವೀಣ್ಗೆ ಸೇರಿದ ಕಾರಿನ ಗಾಜು ಪುಡಿಯಾಗಿದೆ. ಕಾರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕಿಡಿಗೇಡಿಗಳ ಬಂಧನಕ್ಕೆ ಮುಂದಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.