ADVERTISEMENT

ಸೋಮವಾರಪೇಟೆ: ಆಟೊ ಜಖಂಗೊಳಿಸಿದ ಕಾಡಾನೆ ಹಿಂಡು; ಚಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 17:18 IST
Last Updated 27 ಫೆಬ್ರುವರಿ 2021, 17:18 IST
ಸೋಮವಾರಪೇಟೆ ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ಆನೆ ದಾಳಿಯಿಂದ ಜಖಂಗೊಂಡ ಆಟೊ
ಸೋಮವಾರಪೇಟೆ ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ಆನೆ ದಾಳಿಯಿಂದ ಜಖಂಗೊಂಡ ಆಟೊ   

ಸೋಮವಾರಪೇಟೆ (ಕೊಡಗು): ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ, ಆಟೊವೊಂದರ ಮೇಲೆ ಕಾಡಾನೆ ಹಿಂಡು ದಾಳಿ ನಡೆಸಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಿತ್ಲುಮಕ್ಕಿ ಗ್ರಾಮದ ಕುಟ್ಟಪ್ಪ ಅವರು ಬೆಳಿಗ್ಗೆ 5 ಗಂಟೆ ಸುಮಾರಿಗೆ ಆಟೊದಲ್ಲಿ ಹೊಸಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಅಬ್ಬೂರುಕಟ್ಟೆ ಚರ್ಚ್ ಬಳಿಯಲ್ಲಿದ್ದ ಕಾಡಾನೆ ಹಿಂಡು ಆಟೊ ಮೇಲೆ ಏಕಾಏಕಿ ದಾಳಿ ಮಾಡಿದೆ. ಮಗುಚಿ ಬಿದ್ದಿದ್ದ ಆಟೊ ಜಖಂಗೊಂಡಿದ್ದರೆ, ಕುಟ್ಟಪ್ಪ ಅವರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಸ್ಥಳೀಯರು, ಅವರನ್ನು ರಕ್ಷಿಸಿ ಚರ್ಚ್‌ನ ಕಾಂಪೌಂಡ್ ಒಳಗೆ ಕರೆತಂದಿದ್ದಾರೆ. ಕೆರಳಿದ್ದ ಆನೆಗಳು ಚರ್ಚ್‌ ಕಾಂಪೌಂಡ್‌ ಅನ್ನೂ ಉರುಳಿಸಿವೆ.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕುಟ್ಟಪ್ಪ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.