ADVERTISEMENT

ಕೊಡಗಿಗೆ ಕಂದಾಯ ಸಚಿವ ಆರ್.ಅಶೋಕ್‌ ಭೇಟಿ; ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 13:38 IST
Last Updated 6 ಜುಲೈ 2022, 13:38 IST
ಕಾವೇರಿ– ಹಾರಂಗಿ ನದಿಗಳ ಸಂಗಮ ಪ್ರದೇಶವನ್ನು ವೀಕ್ಷಿಸಿದ ಕಂದಾಯ ಸಚಿವ ಆರ್.ಅಶೋಕ್‌
ಕಾವೇರಿ– ಹಾರಂಗಿ ನದಿಗಳ ಸಂಗಮ ಪ್ರದೇಶವನ್ನು ವೀಕ್ಷಿಸಿದ ಕಂದಾಯ ಸಚಿವ ಆರ್.ಅಶೋಕ್‌    

ಮಡಿಕೇರಿ: ಕಂದಾಯ ಸಚಿವ ಆರ್.ಅಶೋಕ್‌ ಅವರು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿನ ಕಾವೇರಿ– ಹಾರಂಗಿ ನದಿಗಳ ಸಂಗಮ ಪ್ರದೇಶವನ್ನು ವೀಕ್ಷಿಸಿದರು.

ಬುಧವಾರ ಸಂಜೆ ಇಲ್ಲಿಗೆ ಬಂದ ಅವರು, ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿರುವ ಪ್ರಮಾಣ, ಒಳಹರಿವುಗಳ ಅಂಕಿಅಂಶಗಳನ್ನು ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಅವರಿಂದ ಪಡೆದರು. ಒಂದು ವೇಳೆ ನೀರಿನ ಹರಿವು ಇನ್ನಷ್ಟು ಹೆಚ್ಚಾದರೆ ಉದ್ಭವಿಸಬಹುದಾದ ಪರಿಸ್ಥಿತಿ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು. ಬಳಿಕ ಅವರು ಇಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಭೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT