ಸಿದ್ದಾಪುರ: ಕರಡಿಗೋಡು ಬಸವೇಶ್ವರ ದೇವಾಲಯ ವಾರ್ಷಿಕೋತ್ಸವ ಕೊನೆ ದಿನ ಮಂಗಳವಾರ ವಿವಿಧ ಪೂಜೆ ನಡೆಯಿತು.
ಉತ್ಸವದ ಕೊನೆ ದಿನ ಮಂಗಳವಾರದಂದು ರುದ್ರಪಾರಾಯಣ, ದೇವತಾ ಪ್ರಾರ್ಥನೆ, ಗಂಗಾ ಪೂಜೆ, ಗಂಗಾ ಸ್ನಾನ ನಡೆಯಿತು. ಬಳಿಕ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಕೊಂಡ ಸೇವೆ ನಡೆಯಿತು.
ಪಲ್ಲಕ್ಕಿಗೆ ಭಕ್ತರು ವಿಶೇಷ ಪ್ರಾರ್ಥನೆ ನೆರವೇರಿಸಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.