ADVERTISEMENT

ವಿರಾಜಪೇಟೆ: ಚೆಂಡೆಮೇಳ ತಂಡಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 13:08 IST
Last Updated 4 ಜೂನ್ 2025, 13:08 IST
 ವಿರಾಜಪೇಟೆ ಸಮೀಪದ ಪೆರುಂಬಾಡಿ ಗ್ರಾಮ ಶ್ರೀ ಭಗವತಿ ಚೆಂಡೆ ಮೇಳ ತಂಡ 
 ವಿರಾಜಪೇಟೆ ಸಮೀಪದ ಪೆರುಂಬಾಡಿ ಗ್ರಾಮ ಶ್ರೀ ಭಗವತಿ ಚೆಂಡೆ ಮೇಳ ತಂಡ    

ವಿರಾಜಪೇಟೆ: ಹಿರಿಯರು ಆಚರಿಸಿಕೊಂಡು ಬಂದಿರುವ  ಆಚಾರ, ಪದ್ಧತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಎ. ಮಹೇಶ್ ಗಣಪತಿ ಅವರು ಹೇಳಿದರು.

ಪೆರುಂಬಾಡಿ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ  ಶ್ರೀ ಭಗವತಿ ಚೆಂಡೆಮೇಳ ತಂಡಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಹೊರ ದೇಶದ ಸಂಸ್ಕೃತಿಗಳ ಮೋರೆ ಹೋಗುತ್ತಿರುವುದು ಕಂಡು ಬರುತ್ತಿದೆ. ಯುವಕರು ದುಷ್ಚಟಗಳನ್ನು ದೂರಮಾಡಿ ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದರು.

ಶ್ರೀ ಭಗವತಿ ಚಂಡೆಮೇಳ ತಂಡದವರು ಪೆರುಂಬಾಡಿ ಚೆಕ್‌ಪೋಸ್ಟ್‌ನಿಂದ ಚೆಂಡೆಮದ್ದಳೆ ಬಾರಿಸುತ್ತ ಸಾಗಿ ಗ್ರಾಮದ ಚಾಮುಂಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಕರಾಟೆ ಶಿಕ್ಷಕ ಶಿವಪ್ಪ, ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಮಹೇಶ್, ವಿರಾಜಪೇಟೆ ಮುತ್ತಪ್ಪ ದೇವಾಲಯ ಸಮಿತಿಯ ಸುಮೇಶ್, ಹಿಂದೂ ಮಲಯಾಳಿ ಸಂಘದ ವಿನೂಪ್ ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್, ದಾನಿಗಳಾದ ಬಿ.ಆರ್.ಗಣೇಶ್, ಕಲಾವಿದರಾದ ಮಾಲ್ದಾರೆ ಭಾವ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿರಾಜಪೇಟೆ ಸಮೀಪದ ಪೆರುಂಬಾಡಿ ಗ್ರಾಮದ ಅಯ್ಯಪ್ಪ ದೇವಸ್ಥಾನ ಸಭಾಂಗಣದಲ್ಲಿ ಈಚೆಗೆ  ಶ್ರೀ ಭಗವತಿ ಚೆಂಡೆ ಮೇಳ ತಂಡಕ್ಕೆ ಚಾಲನೆ ನೀಡಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.