ADVERTISEMENT

ಕೋಟೆ ಅಬ್ಬಿ ಜಲಪಾತ: ತೆಲಂಗಾಣದ ಮೂವರು ಪ್ರವಾಸಿಗರು ನೀರುಪಾಲು

​ಪ್ರಜಾವಾಣಿ ವಾರ್ತೆ
Published 29 ಮೇ 2022, 14:30 IST
Last Updated 29 ಮೇ 2022, 14:30 IST
   

ಮಡಿಕೇರಿ: ತಾಲ್ಲೂಕಿನ ಕೋಟೆ ಅಬ್ಬಿ ಜಲಪಾತಕ್ಕೆ ಬಂದಿದ್ದ ತೆಲಂಗಾಣದ ಮೂವರು ಪ್ರವಾಸಿಗರು ನೀರುಪಾಲಾಗಿದ್ದಾರೆ.
ಶ್ಯಾಮ (36), ಶಾಹಿಂದ್ರ (16), ಶ್ರೀಹರ್ಷ(18) ಅವರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಕೊಡಗು ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ತೆಲಂಗಾಣದ 13 ಪ್ರವಾಸಿಗರು ಕುಶಾಲನಗರ ಸಮೀಪದ ಹೋಂಸ್ಟೇಯಲ್ಲಿ ವಾಸ್ತವ್ಯ ಮಾಡಿದ್ದರು. ಭಾನುವಾರ ಬೆಳಿಗ್ಗೆ ಮಾಂದಲ್‌ಪಟ್ಟಿ ವೀಕ್ಷಿಸಿ ಕೋಟೆ ಅಬ್ಬಿ ಜಲಪಾತಕ್ಕೆ ತೆರಳಿದ್ದರು. ಅಲ್ಲಿ ನೀರಿಗೆ ಇಳಿದು ಆಟವಾಡುವಾಗ ಮೂವರು ನೀರಿನಲ್ಲಿ ಕೊಚ್ಚಿ ‌ಹೋಗಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೃತದೇಹ ಹೊರಗೆ ತೆಗೆಯಲಾಯಿತು. ಜೊತೆಗೆ ಬಂದಿದ್ದ ಉಳಿದ ಪ್ರವಾಸಿಗರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT