ವಿರಾಜಪೇಟೆ (ಕೊಡಗು ಜಿಲ್ಲೆ): ಅಂತರರಾಷ್ಟ್ರೀಯ ಹಾಕಿ ಆಟಗಾರ ಮೇಕೇರಿರ ನಿತಿನ್ ತಿಮ್ಮಯ್ಯ ಅವರು ಮದ್ರೀರ ವಿಷ್ಮಾ ದೇಚಮ್ಮ ಅವರನ್ನು ವರಿಸುವ ಮೂಲಕ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಸಮೀಪದ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಸಾಂಸ್ಕೃತಿಕ ಕೇಂದ್ರದಲ್ಲಿ ವಿವಾಹವು ಕೊಡವ ಸಂಪ್ರದಾಯದಂತೆ ನಡೆಯಿತು. ವಧು–ವರರು ಕೊಡವ ಉಡುಗೆಯಲ್ಲಿ ಮಿಂಚಿದರು.
ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ಚೇಂದಂಡ ನಿಕಿನ್ ತಿಮ್ಮಯ್ಯ, ನಿಕಿಲ್ ತಿಮ್ಮಯ್ಯ, ವಿ.ಆರ್.ರಘುನಾಥ್,ವಿ.ಎಸ್.ವಿನಯ್, ಹಿರಿಯ ಹಾಕಿಪಟು ಎ.ಬಿ.ಸುಬ್ಬಯ್ಯ ಶುಭ ಹಾರೈಸಿದರು. ಅತಿಥಿಗಳಿಗೆ ಕೊಡಗಿನ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಸೋಮವಾರ ರಾತ್ರಿ ಚಪ್ಪರ ಶಾಸ್ತ್ರ ನಡೆದಿತ್ತು.
ನಿತಿನ್ ತಿಮ್ಮಯ್ಯ ಹಾಗೂ ವಿಷ್ಮಾ ದೇಚಮ್ಮ ಅವರ ನಿಶ್ಚಿತಾರ್ಥವು ಜೂನ್ 17ರಂದು ವಿರಾಜಪೇಟೆಯಲ್ಲಿ ನಡೆದಿತ್ತು. ನಿತಿನ್ ತಿಮ್ಮಯ್ಯ, ಕೊಡಗಿನ ಹಾಲುಗುಂದ ಗ್ರಾಮದ ಮೇಕೇರಿರ ರವಿ ಪೆಮ್ಮಯ್ಯ ಮತ್ತು ರತ್ನಾ ಪೆಮ್ಮಯ್ಯ ದಂಪತಿಯ ಪುತ್ರ.2010ರಿಂದ 2014ರ ವರೆಗೆ ಭಾರತ ಹಾಕಿ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.