ADVERTISEMENT

ಬಾವಿಗೆ ಬಿದ್ದ ವ್ಯಕ್ತಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 3:00 IST
Last Updated 15 ನವೆಂಬರ್ 2020, 3:00 IST
ಸಿದ್ದಾಪುರ ಸಮೀಪದ ಕರಡಿಗೋಡು ರಸ್ತೆ ಬಳಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲಾಯಿತು
ಸಿದ್ದಾಪುರ ಸಮೀಪದ ಕರಡಿಗೋಡು ರಸ್ತೆ ಬಳಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲಾಯಿತು   

ಸಿದ್ದಾಪುರ: ಕರಡಿಗೋಡು ರಸ್ತೆ ಸಮೀಪ ಶನಿವಾರ ಮುಂಜಾನೆ ಬಾವಿಗೆ ಬಿದ್ದ ವ್ಯಕ್ತಿಯನ್ನು ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿ, ರಕ್ಷಿಸಲಾಯಿತು.

ಕರಡಿಗೋಡು ನಿವಾಸಿ ಕೃಷ್ಣ (55) ಎಂಬುವವರು ಮನೆಯ ಮುಂಭಾಗ ಇದ್ದ ಕುಡಿಯುವ ನೀರಿನ ಬಾವಿಗೆ ಕಾಲುಜಾರಿ ಬಿದ್ದಿದ್ದಾರೆ. ಪತಿ ಹುಡುಕಿಕೊಂಡು ಪತ್ನಿ ಸರಸು, ಮನೆಯ ಮುಂಭಾಗ ಬಂದಾಗ ಬಾವಿಯಿಂದ ಪತಿಯ ಧ್ವನಿ ಕೇಳಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಕೃಷ್ಣ ಅವರನ್ನು ಬಾವಿಯಿಂದ ಮೇಲೆತ್ತಲು ಯತ್ನಿಸಿ ವಿಫಲರಾಗಿದ್ದಾರೆ. ಆಗ ಗೋಣಿಕೊಪ್ಪ ಅಗ್ನಿಶಾಮಕದಳದ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ 40 ಅಡಿ ಆಳದ ಬಾವಿಯಿಂದ ಕೃಷ್ಣ ಅವರನ್ನು ಮೇಲೆತ್ತಿದ್ದಾರೆ.

ADVERTISEMENT

ಕೃಷ್ಣ ಅವರಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾ ಯಿತು. ಸಹಾಯಕ ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿ ಭರತ್ ಕಾರ್ಯಾಚರಣೆಗೆ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.