ADVERTISEMENT

ಕೊಡಗು | ನಾಗರಹಾವು, ಮರಿಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 15:23 IST
Last Updated 16 ಮೇ 2020, 15:23 IST
ಕುಶಾಲನಗರ ಸಮೀಪದ ಮಾದಪಟ್ಟಣ ಗ್ರಾಮದ ಹೊಲದಲ್ಲಿದ್ದ ನಾಗರಹಾವು ಅನ್ನು ಸ್ನೇಕ್ ಗಫೂರ್ ರಕ್ಷಣೆ ಮಾಡಿದರು
ಕುಶಾಲನಗರ ಸಮೀಪದ ಮಾದಪಟ್ಟಣ ಗ್ರಾಮದ ಹೊಲದಲ್ಲಿದ್ದ ನಾಗರಹಾವು ಅನ್ನು ಸ್ನೇಕ್ ಗಫೂರ್ ರಕ್ಷಣೆ ಮಾಡಿದರು   

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ಹೊಲದಲ್ಲಿದ್ದ ನಾಗರಹಾವು ಹಾಗೂ ಸುಮರು 40 ಮರಿಗಳನ್ನು ಕೂಡಿಗೆ ಸ್ನೇಕ್ ಗಫೂರ್ ಶನಿವಾರ ರಕ್ಷಣೆ ಮಾಡಿದ್ದಾರೆ.

ಹೊಲದಲ್ಲಿ ಬೆಳಿಗ್ಗೆ ಉದ್ದನೆಯ ನಾಗರಹಾವು ಹಾಗೂ ಅದರ ಮರಿಗಳನ್ನು ಕಂಡ ಗ್ರಾಮಸ್ಥರು ಕೂಡಲೇ ಸ್ನೇಕ್ ಗಫೂರ್ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಅವರು ನಾಗರಹಾವು ಹಾಗೂ ಮರಿಗಳನ್ನು ಹಿಡಿದು ಸುರಕ್ಷಿತವಾಗಿ ಆನೆಕಾಡು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT