ಶನಿವಾರಸಂತೆ: ಪಟ್ಟಣದ ಸೆಕ್ರೇಡ್ ಆರ್ಟ್ ವಿದ್ಯಾಸಂಸ್ಥೆಯ ಬಳಿ ಶುಕ್ರವಾರ ಮುಂಜಾನೆ 5.30ರ ಸಮಯದಲ್ಲಿ ಬಂದ ಎರಡು ಕಾಡಾನೆಗಳು ಸಂಸ್ಥೆಯ ಗೇಟ್ ಹಾಗೂ ತಡೆಗೋಡೆಯನ್ನು ಕೆಡವಿ ಹಾನಿಗೊಳಿಸಿವೆ.
ಕಾಜೂರು ಗ್ರಾಮದ ಕಡೆಯಿಂದ ಬಂದ ಆನೆಗಳು ಸಂಸ್ಥೆಯ ತಡೆಗೋಡೆ ಹಾಗೂ ಗೆಟ್ಅನ್ನು ಬೀಳಿಸಿ ನಂತರ ಚಿಕ್ಕಕೊಳತ್ತೂರು ಗ್ರಾಮದ ರಸ್ತೆಯಲ್ಲಿ ಸಾಗಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಸಂಬಂಧ ಸಂಸ್ಥೆಯ ಫಾದರ್ ಸಜಿ ಅವರು, ಶನಿವಾರಸಂತೆ ವಲಯ ಅರಣ್ಯ ಅಧಿಕಾರಿ ಪ್ರಫುಲ್ ಶೆಟ್ಟಿ ಅವರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.