ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗಣಗೂರಿನ ಪಾರ್ವತಿ ಶೇಖರ್ ಅವರ ಮನೆಯ ಕಿಟಕಿ ಸರಳುಗಳನ್ನು ಮುರಿದ ಕಾಡಾನೆ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ಸೇವಿಸಲು ಯತ್ನಿಸಿದೆ. ಈ ವೇಳೆ ಮನೆಯಲ್ಲಿದ್ದವರು ಕಿರುಚಿದ್ದರಿಂದ ಆನೆ ಅಲ್ಲಿಂದ ಹೊರಟಿದೆ.
ಹೋಗುವಾಗ ಆನೆಯು ಅವರ ಮನೆಯ ಗೋಡೆ, ಕಿಟಕಿ, ಕೊಳವೆಬಾವಿ ಪೈಪ್, ಅಡಿಕೆ, ತೆಂಗು, ಕಾಫಿ ಗಿಡಗಳನ್ನ ನಾಶಪಡಿಸಿದೆ.
ಅದೇ ಗ್ರಾಮದ ಎಂ.ಎನ್ ಚಂದ್ರಪ್ಪ ಹಾಗೂ ಕುದುಪಜೆ ನಾಗೇಶ್ ಅವರ ಜಮೀನಿಗೂ ಕಾಲಿಟ್ಟ ಕಾಡಾನೆಗಳು ಶುಂಠಿ,ತೆಂಗು,ಅಡಿಕೆ,ಬಾಳೆ,ಕಾಫಿ ಸೇರಿದಂತೆ ರೈತರು ಬೆಳೆದ ಬೆಳೆಗಳನ್ನ ನಾಶಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.