ADVERTISEMENT

ಅದಾಲತ್‌ನಲ್ಲಿ 399 ಅರ್ಜಿ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 4:59 IST
Last Updated 1 ಮಾರ್ಚ್ 2014, 4:59 IST

ಮಾಲೂರು: ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌­ನಲ್ಲಿ ರೈತರ 399 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಯಿತು.

ತಹಶೀಲ್ದಾರ್‌ ಡಾ.ಸುಧಾ ಪಾಯ್ಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿ  ಅರಳೇರಿ, ಮೈಲಾಂಡಹಳ್ಳಿ, ಸಂತೇಹಳ್ಳಿ ಮತ್ತು ಕುಡಿಯನೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಅರ್ಜಿಗಳನ್ನು ಸ್ವೀಕರಿಸಿದ ತಹ­ಶೀ­ಲ್ದಾರ್ ಡಾ.ಸುಧಾ ಮಾತನಾಡಿ ತಾಲ್ಲೂ­­ಕಿನ ಟೇಕಲ್, ಮಾಸ್ತಿ, ಲಕ್ಕೂರು ಮತ್ತು ಕಸಬಾ ಹೋಬಳಿ­ಗಳಲ್ಲಿ ಕಂದಾಯ ಅದಾಲತ್‌ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಇತ್ಯರ್ಥವಾಗದ ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ. ಮಾ.5ರ­ವರೆಗೆ ಕಸಬಾ ಹೋಬಳಿ, ಮಡಿವಾಳ ಬೈರ್ನಹಳ್ಳಿ ಮತ್ತು ದೊಡ್ಡ­ಕಡತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲೂ ಅದಾಲತ್ ನಡೆಯಲಿದೆ. ರೈತರು ಇದರ ಸದುಪಯೋಗ ಪಡಿಸಿ­ಕೊಳ್ಳು­­ವಂತೆ ಸಲಹೆ ನೀಡಿದರು.

ಕಂದಾಯ ಇಲಾಖೆ ಅಧಿಕಾರಿ ಕೆ.ಆರ್.ಬೀರಪ್ಪ, ಗ್ರಾಮ ಲೆಕ್ಕಿಗರಾದ ಶಂಕರ್, ವೆಂಕಟೇಶ್, ನಾರಾ­ಯಣಸ್ವಾಮಿ, ರವಿಕುಮಾರ್, ಶ್ರೀನಿ­ವಾಸ್, ಶಿಲ್ಪ, ಮೋನಿಶ್ ಭಾಗ­ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.