ADVERTISEMENT

ಕಳ್ಳರ ಬಂಧನ: ಮಾಲು ವಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 11:19 IST
Last Updated 9 ನವೆಂಬರ್ 2019, 11:19 IST
ಕೋಲಾರ ನಗರ ಠಾಣೆ ಪೊಲೀಸರು ಕನ್ನಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡ ಕಾರು, ಬೈಕನ್ನು ಶನಿವಾರ ಪ್ರದರ್ಶಿಸಿದರು.
ಕೋಲಾರ ನಗರ ಠಾಣೆ ಪೊಲೀಸರು ಕನ್ನಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡ ಕಾರು, ಬೈಕನ್ನು ಶನಿವಾರ ಪ್ರದರ್ಶಿಸಿದರು.   

ಕೋಲಾರ: ಕಾರು, ಬೈಕ್‌ಗಳನ್ನು ಕಳವು ಮಾಡಿ ತಲೆ ಮರಿಸಿಕೊಂಡಿದ್ದ ಇಬ್ಬರು ಕಳ್ಳರನ್ನು ನಗರಠಾಣೆ ಪೊಲೀಸರು ಬಂಧಿಸಿ, ₹11 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

‘ಜಿಲ್ಲೆಯ ಮಾಲೂರು ತಾಳ್ಲೂಕಿನ ಮಿರಪನಹಳ್ಳಿ ಗ್ರಾಮದ ಮಂಜುನಾಥ್ (26) ಮತ್ತು ತಮಿಳುನಾಡಿನ ಹೊಸೂರು ತಾಲ್ಲೂಕಿನ ಇಚ್ಚಂಗೂರು ಗೇಟ್‌ನ ವಾಸಿ ಯಾಸೀನ್ (20) ಆರೋಪಿಗಳನ್ನು ಬಂಧಿಸಿದ್ದು, ಇವರಿಂದ 3 ಕಾರು, 1 ದ್ವಿಚಕ್ರ ವಾಹನ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಡಿವೈಎಸ್ಪಿ ಚೌಡಪ್ಪ ತಿಳಿಸಿದರು.

‘ಇಬ್ಬರು ಆರೋಪಿಗಳ ವಿರುದ್ಧ ಕೋಲಾರ ನಗರ ಪೊಲೀಸ್ ಠಾಣೆ, ಬೆಂಗಳೂರು ಮೈಕೋ ಲೇಔಟ್ ಪೊಲೀಸ್ ಠಾಣೆ, ಜೆಪಿ ನಗರ ಪೊಲೀಸ್ ಠಾಣೆ, ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದರು.

ADVERTISEMENT

‘ಕೋಲಾರ ನಗರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಜಿ.ಫಾರೂಕ್‌ ಪಾಷಾ. ಎಸ್‌ಐ ಎಂ.ಆರ್.ಅಣ್ಣಯ್ಯ ಮತ್ತು ಸಿಬ್ಬಂದಿ ತಂಡವು ಆರೋಪಿಯನ್ನು ಬಂಧಿಸಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸಿಪಿಐ ಫಾರೂಖ್‌ಪಾಷ, ಪಿಎಸ್‌ಐ ಅಣ್ಣಯ್ಯ, ಅಪರಾಧ ವಿಭಾಗದ ಸಿಬ್ಬಂದಿ ಹಮೀದ್‌ಖಾನ್, ರಾಘವೇಂದ್ರ, ನರೇಂದ್ರ, ಆರ್.ನಾರಾಯಣಸ್ವಾಮಿ, ಗುರುಪ್ರಸಾದ್, ಚಲಪತಿ, ಮಂಜುನಾಥ, ವೆಂಕಟರಮಣ, ಶ್ರೀನಾಥ್, ಜಾವೀದ್‌ಪಾಷ, ಶ್ರೀನಿವಾಸಲು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.