ADVERTISEMENT

ಕೋಲಾರ: ವರದಕ್ಷಿಣೆ ಕೇಳಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 11:30 IST
Last Updated 13 ಮೇ 2020, 11:30 IST
ಎಂ.ಎನ್.ಮಮತಾ
ಎಂ.ಎನ್.ಮಮತಾ   

ಮುಳಬಾಗಿಲು: ತಾಲ್ಲೂಕಿನ ಮಾರಾಂಡಹಳ್ಳಿ ಗ್ರಾಮದಲ್ಲಿ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಪೋಷಕರನ್ನು ಒಪ್ಪಿಸಿದ ಯುವತಿ, ಯುವಕನ ಪಾಲಕರು ವರದಕ್ಷಿಣೆ ಕೇಳಿದರೆಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಯುವತಿ ನಾಲ್ಕು ಪುಟದ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಮಾರಾಂಡಹಳ್ಳಿಯ ಎಂ.ಎನ್.ಮಮತಾ (21) ಹಾಗೂ ತಾಯಲೂರು ಹೋಬಳಿ ಟಿ.ಅಗರ ಗ್ರಾಮದ ಭಾನುಪ್ರಕಾಶ್ (25) ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಪೋಷಕರನ್ನು ಒಪ್ಪಿಸಿ ಮದುವೆ ನಿಶ್ಚಯಿಸಿದ್ದರು ಎನ್ನಲಾಗಿದೆ.

ಇಬ್ಬರು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಎರಡು ಕುಟುಂಬದ ಸದಸ್ಯರು ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಗಂಡಿನ ಕಡೆಯವರು ನಿಶ್ಚಿತಾರ್ಥದ ನಂತರ ವರದಕ್ಷಿಣಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ADVERTISEMENT

ಮೃತ ಯುವತಿಯ ಪಾಲಕರು ನೀಡಿದ ದೂರಿನ ಮೇರೆಗೆ ಮುಳಬಾಗಿಲು ಗ್ರಾಮಾಂತರ ಪಿಎಸ್ಐ ಆರ್.ಪ್ರದೀಪ್‌ಸಿಂಗ್ ಅವರು ಭಾನುಪ್ರಕಾಶ್, ವೇದಮ್ಮ, ನಾಗರಾಜ್, ವೇಣು, ಮೀನಾಕ್ಷಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.