ADVERTISEMENT

ಮದ್ದೇರಿ: ವೆಂಕಟೇಶ್, ಲಕ್ಷ್ಮಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 12:47 IST
Last Updated 9 ಆಗಸ್ಟ್ 2023, 12:47 IST
ಕೋಲಾರ ತಾಲ್ಲೂಕಿನ ಮದ್ದೇರಿ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಚ್ಚಾರಲಹಳ್ಳಿ ಆರ್‌.ವೆಂಕಟೇಶ್ ಹಾಗೂ ಲಕ್ಷ್ಮಿ ಅವರೊಂದಿಗೆ ಸದಸ್ಯರು, ಮುಖಂಡರು
ಕೋಲಾರ ತಾಲ್ಲೂಕಿನ ಮದ್ದೇರಿ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಚ್ಚಾರಲಹಳ್ಳಿ ಆರ್‌.ವೆಂಕಟೇಶ್ ಹಾಗೂ ಲಕ್ಷ್ಮಿ ಅವರೊಂದಿಗೆ ಸದಸ್ಯರು, ಮುಖಂಡರು   

ವೇಮಗಲ್‌ (ಕೋಲಾರ): ಹೋಬಳಿಯ ಮದ್ದೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪಚ್ಚಾರಲಹಳ್ಳಿ ಆರ್‌.ವೆಂಕಟೇಶ್, ಉಪಾಧ್ಯಕ್ಷರಾಗಿ ಲಕ್ಷ್ಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ರಮೇಶ್ ಬಾಬು ಕಾರ್ಯನಿರ್ವಹಿಸಿದರು.

ಕೋಲಾರ ಯೂನಿಯನ್ ನಿರ್ದೇಶಕ ಚೆಂಜಿಮಲೆ ರಮೇಶ್ ಮಾತನಾಡಿ, ‘ಕೋಲಾರ ಕ್ಷೇತ್ರದಲ್ಲಿ ಗ್ರಾಮಗಳ ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಇರುವುದರಿಂದ ಗ್ರಾಮಗಳನ್ನು ಅಭಿವೃದ್ಧಿ ಮಾಡಲು ಸಹಾಯವಾಗುತ್ತದೆ. ಜಿಲ್ಲಾ ಪಂಚಾಯಿತಿಯ ಕ್ಯಾಲನೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ’ ಎಂದರು.

ADVERTISEMENT

ಮದ್ದೇರಿ ರೇಷ್ಮೆ ಬೆಳೆಗಾರರ ಸಹಕಾರದ ಸಂಘದ ಅಧ್ಯಕ್ಷ ಜಂಬಾಪುರ ಎಂ.ವೆಂಕಟರಾಂ, ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ ಗೌಡ, ಮಾಜಿ ಅಧ್ಯಕ್ಷೆ ಪುಷ್ಪಮ್ಮ, ಉಪಾಧ್ಯಕ್ಷರಾದ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರೇಗೌಡ, ರಾಮಯ್ಯ, ಪ್ರೇಮಾ, ಡಿ.ಎನ್ ಬಾಬು, ಬಸವರಾಜು, ವೆಂಕಟಮ್ಮ, ಲಕ್ಷ್ಮಿದೇವಮ್ಮ, ವೆಂಕಟಸ್ವಾಮಿ, ವನ್ನ ಕುಮಾರ್, ಪಿಡಿಒ ಮಂಜುನಾಥ್ ಪ್ರಸಾದ್, ವೆಂಕಟೇಶಪ್ಪ, ಮುಖಂಡರಾದ ಚೋಳಘಟ್ಟ ಬಾಲಯ್ಯ, ಚಲಪತಿ, ವಕೀಲ ವೆಂಕಟೇಶ್, ಇರಗಸಂದ್ರ ಇವಿ ಮಂಜುನಾಥ್ ಇದ್ದರು,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.