
ಕೋಲಾರ: ದೇಶದ ರಾಜಧಾನಿ ದೆಹಲಿಯಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಕೆಜಿಎಫ್ ತಾಲ್ಲೂಕಿನ ಕಂಗನಲ್ಲೂರು ಗ್ರಾಮದ ಕಲಾವಿದ ಕೆ.ಎಸ್.ಗೋವಿಂದಸ್ವಾಮಿ ಭಾಗವಹಿಸಿದ್ದರು.
ದೆಹಲಿಯ ಕರ್ತವ್ಯ ಪಥ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯದ 11 ಕಲಾವಿದರ ಪೈಕಿ ನಾದಸ್ವರ ಕಲಾವಿದ ಗೋವಿಂದಸ್ವಾಮಿ ಕೂಡ ಒಬ್ಬರು. ಅವರಿಗೆ ಗೌರವ ಅಭಿನಂದನೆ ಲಭಿಸಿತು. ದೇಶದ ವಿವಿಧೆಡೆಯಿಂದ ಬಂದಿದ್ದ ಸುಮಾರು 2,500 ಕಲಾವಿದರು ಭಾಗವಹಿಸಿದ್ದರು.
ನಟರಾಜ್, ಕುಂಬಳಗೂಡು (ಡೋಲ್), ಗಂಗಾಧರ ಕೆಂಚನಕುಪ್ಪೆ, ಬಿಡದಿ (ಡೋಲ್), ಹರಿದರ್, ಮೇಲುಕೋಟೆ (ನಾದಸ್ವರ), ಅಭಿಲಾಷ್, ಮೇಲುಕೋಟೆ (ನಾದಸ್ವರ), ರೋಹಿತ್, ನಂಜನಗೂಡು (ನಾದಸ್ವರ), ಗಿರೀಶ್ ಎಂ.ಎನ್, ಮೇಲುಕೋಟೆ(ನಾದಸ್ವರ), ಯೋಗೇಶ್,ನಂಜನಗೂಡು (ನಾದಸ್ವರ), ಮುರುಗೇಶ್, ವ್ಯಾಪಾನಪಲ್ಲಿ (ನಾದಸ್ವರ), ಸ್ವಾಗತ್ ಬಿ.ಎಂ, ಬಿಳಿಕೆರೆ ಮೈಸೂರು (ನಾದಸ್ವರ), ರಾಮಪ್ರಿಯಾ, ಚಿಣ್ಯ (ನಾದಸ್ವರ) ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ರಾಜ್ಯದ ಇನ್ನಿತರ ಕಲಾವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.