ADVERTISEMENT

ತಂತಿ ಬೇಲಿಗೆ ಸಿಲುಕಿ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2021, 15:13 IST
Last Updated 27 ಮೇ 2021, 15:13 IST
ಕೋಲಾರ ತಾಲ್ಲೂಕಿನ ಟಿ.ಪುರಹಳ್ಳಿ ಸಮೀಪ ಚಿರತೆಯೊಂದು ಮಾವಿನ ತೋಟದ ತಂತಿ ಬೇಲಿಗೆ ಸಿಲುಕಿ ಮೃತಪಟ್ಟಿರುವುದು.
ಕೋಲಾರ ತಾಲ್ಲೂಕಿನ ಟಿ.ಪುರಹಳ್ಳಿ ಸಮೀಪ ಚಿರತೆಯೊಂದು ಮಾವಿನ ತೋಟದ ತಂತಿ ಬೇಲಿಗೆ ಸಿಲುಕಿ ಮೃತಪಟ್ಟಿರುವುದು.   

ಕೋಲಾರ: ತಾಲ್ಲೂಕಿನ ಟಿ.ಪುರಹಳ್ಳಿ ಬಳಿಯ ಮಾವಿನ ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಚಿರತೆಯೊಂದು ಬುಧವಾರ ಮೃತಪಟ್ಟಿದೆ.

ಟಿ.ಪುರಹಳ್ಳಿ ಮತ್ತು ಬುಸನಹಳ್ಳಿ ನಡುವೆ ಇರುವ ತಲಗುಂದ ಗ್ರಾಮದ ರಾಮಕೃಷ್ಣಪ್ಪ ಎಂಬುವರಿಗೆ ಸೇರಿದ ಮಾವಿನ ತೋಪಿಗೆ ಹಾಕಿದ್ದ ತಂತಿ ಬೇಲಿ ದಾಟುವ ಪ್ರಯತ್ನದಲ್ಲಿ ಚಿರತೆಯ ತಲೆ ಸಿಲುಕಿಕೊಂಡಿದೆ. ಗುರುವಾರ ನಸುಕಿನಲ್ಲಿ ಜಮೀನು ಬಳಿ ಹೋದ ರೈತರೊಬ್ಬರು ಚಿರತೆ ಕಂಡು ಭಯಬಿದ್ದು ಅಲ್ಲಿಂದ ಓಡಿ ಹೋಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ತಂತಿ ಬೇಲಿಯಿಂದ ತಪ್ಪಿಸಿಕೊಳ್ಳಲು ಹೆಣಗಾಡಿ ಸ್ಥಳದಲ್ಲೇ ಮೃತಪಟ್ಟಿದೆ. ಈ ಸಂಗತಿ ತಿಳಿದ ಅಕ್ಕಪಕ್ಕದ ಗ್ರಾಮಗಳ ಯುವಕರು ಚಿರತೆ ಮೃತ ದೇಹದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.