ADVERTISEMENT

ಮಾಲೂರು | ರಾಷ್ಟ್ರೀಯ ಯುವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 6:19 IST
Last Updated 13 ಜನವರಿ 2023, 6:19 IST
ಮಾಲೂರು ಪಟ್ಟಣದ ಪುರಸಭಾ ಉದ್ಯಾನದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ವಿವೇಕಾನಂದ ಸಂಘದ ಅಧ್ಯಕ್ಷ ಆರ್. ಪ್ರಭಾಕರ್ ಪುಷ್ಪನಮನ ಸಲ್ಲಿಸಿದರು
ಮಾಲೂರು ಪಟ್ಟಣದ ಪುರಸಭಾ ಉದ್ಯಾನದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ವಿವೇಕಾನಂದ ಸಂಘದ ಅಧ್ಯಕ್ಷ ಆರ್. ಪ್ರಭಾಕರ್ ಪುಷ್ಪನಮನ ಸಲ್ಲಿಸಿದರು   

ಮಾಲೂರು: ‘ಪ್ರಖರ ಭಾಷಣ ಮತ್ತು ಉಪನ್ಯಾಸದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಲು ವಿವೇಕನಂದರು ಪ್ರಯತ್ನಿಸಿದ್ದರು’ ಎಂದು ವಿವೇಕಾನಂದ ಸಂಘದ ಅಧ್ಯಕ್ಷ ಆರ್. ಪ್ರಭಾಕರ್ ಹೇಳಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವದ ಅಂಗವಾಗಿ ವಿವೇಕಾನಂದ ಸಂಘದಿಂದ ಪಟ್ಟಣದ ಪುರಸಭಾ ಉದ್ಯಾನದಲ್ಲಿರುವ ಸ್ವಾಮಿ ವಿವೇಕಾನಂದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.

ಅವರ ಜನ್ಮದಿನವನ್ನು ದೇಶದಲ್ಲಿ ಪ್ರತಿವರ್ಷ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಯುವಜನರಲ್ಲಿ ಬಿತ್ತುವ ಮಹತ್ತರವಾದ ದಿನ ಇದಾಗಿದೆ ಎಂದರು.

ADVERTISEMENT

ಸ್ವಾಮಿ ವಿವೇಕಾನಂದ ಸಂಘದ ಗೌರವಾಧ್ಯಕ್ಷ ಸಿ. ಲಕ್ಷ್ಮೀನಾರಾಯಣ, ಪುರಸಭಾ ಸದಸ್ಯ ಎಂ.ವಿ. ವೇಮನ, ಮಂಜುನಾಥ್ ಗೌಡ, ದಿನೇಶ್ ಗೌಡ, ಸುಬ್ರಮಣ್ಯ ರೆಡ್ಡಿ, ತಿಮ್ಮಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.