ADVERTISEMENT

ಕೋಲಾರ | ಎಂ.ಸ್ಯಾಂಡ್ ಗಣಿಗಾರಿಕೆಗೆ ವಿರೋಧ

ದೇವರಾಯಸಮುದ್ರ ಗ್ರಾಮದ ಗುಡ್ಡಗಳಲ್ಲಿ ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 5:26 IST
Last Updated 7 ಜುಲೈ 2020, 5:26 IST
ಮುಳಬಾಗಿಲು ನಗರದ ತಾ.ಪಂ ಕಚೇರಿಯಲ್ಲಿ ಇಒ ಎಂ.ಬಾಬು ಅವರಿಗೆ ಸೋಮವಾರ ದೇವರಾಯಸಮುದ್ರ ಬೆಟ್ಟ ಹಿತರಕ್ಷಣಾ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು
ಮುಳಬಾಗಿಲು ನಗರದ ತಾ.ಪಂ ಕಚೇರಿಯಲ್ಲಿ ಇಒ ಎಂ.ಬಾಬು ಅವರಿಗೆ ಸೋಮವಾರ ದೇವರಾಯಸಮುದ್ರ ಬೆಟ್ಟ ಹಿತರಕ್ಷಣಾ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು   

ಮುಳಬಾಗಿಲು: ತಾಲ್ಲೂಕಿನ ದೇವರಾಯಸಮುದ್ರ ಗ್ರಾಮಕ್ಕೆ ಸೇರಿದ ಬೆಟ್ಟ ಗುಡ್ಡಗಳಲ್ಲಿ ಕೆಲ ಪ್ರಭಾವಿಗಳಿಗೆ ಎಂ.ಸ್ಯಾಂಡ್ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವುದು ಸರಿಯಲ್ಲ. ಇದನ್ನು ಕೂಡಲೇ ಕೈಬಿಡಬೇಕು ಎಂದು ದೇವರಾಯಸಮುದ್ರ ಬೆಟ್ಟ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಜು ಹಾಗೂ ಸಮಿತಿ ಸದಸ್ಯರು ಒತ್ತಾಯಿಸಿದರು.

ನಗರದ ಮಿನಿವಿಧಾನಸೌಧದಲ್ಲಿ ಸೋಮವಾರ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಮತ್ತು ತಾಲ್ಲೂಕು ಪಂಚಾಯಿತಿ ಇಒ ಎಂ.ಬಾಬು ಅವರಿಗೆ ಮನವಿ ಸಲ್ಲಿಸಿದರು.

ಸರ್ವೆ ನಂ. 199ರಲ್ಲಿ ಸುಮಾರು 1,300 ಎಕರೆ ಪ್ರದೇಶದಲ್ಲಿ ಗುಡ್ಡಗಳು ಹರಡಿಕೊಂಡಿದ್ದು, ಅಲ್ಲಿ ಬೀಳುವ
ಮಳೆ ನೀರಿನಿಂದ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಜಾನುವಾರುಗಳಿಗೆ ಹಾಗೂ ಜನರಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಸಿಗುತ್ತಿದೆ. ಇಂತಹ ಗುಡ್ಡಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ದೂರಿದರು.

ADVERTISEMENT

ಸ್ಥಳೀಯ ಗ್ರಾಮಗಳ ಜನರಿಗೆ ಮಾಹಿತಿ ನೀಡದೆ ಮತ್ತು ಮುನ್ಸೂಚನೆ ಇಲ್ಲದೆ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳೊಂದಿಗೆ ಕೈ ಜೋಡಿಸಿ ಎಂ.ಸ್ಯಾಂಡ್ ಗಣಿಗಾರಿಕೆಯ ಘಟಕಗಳನ್ನು ಮಂಜೂರು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಚಂಗಲರಾಯಪ್ಪ, ದೇವರಾಯಸಮುದ್ರ ಸೋಮಶೇಖರ್, ಮಲ್ಲಪ್ಪನಹಳ್ಳಿ ವೆಂಕಟೇಶನ್, ಹೊಸಕೆರೆ ರಮೇಶ್, ಸೋಮು, ಕೀಲುಹೊಳಲಿ ಹರೀಶ್ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.