ಕೆಜಿಎಫ್: ಬೆಮಲ್ ನಗರದ ಬಳಿ ಕಿತ್ತುಹೋಗಿರುವ ಲೋಕೋಪಯೋಗಿ ರಸ್ತೆಯನ್ನು ದುರಸ್ತಿ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸಿಂಹ ಗರ್ಜನೆ ವೇದಿಕೆ ಕಾರ್ಯಕರ್ತರು ಗುರುವಾರ ಅಧಿಕಾರಿಗಳ ಮತ್ತು ಗುತ್ತಿಗೆದಾರನ ಶವ ಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
ಬಂಗಾರಪೇಟೆ–ಕೆಜಿಎಫ್ ಮಾರ್ಗವಾಗಿ ವಿ. ಕೋಟೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಡಾಂಬರು ಕಿತ್ತು ಬಂದು ರಸ್ತೆಗಳು ತೀರಾ ಅಧ್ವಾನವಾಗಿವೆ. ವಾಹನ ಸವಾರರು ಕಷ್ಟಪಟ್ಟು ಸಂಚಾರ ನಡೆಸುತ್ತಿದ್ದಾರೆ. ಒಂದೊಂದು ಕಡೆ ಒಂದು ಅಡಿಗಿಂತ ಹೆಚ್ಚು ಆಳ ಇದೆ. ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಹಳ್ಳದಲ್ಲಿ ನೀರು ತುಂಬಿ ರುವುದನ್ನು ಗಮನಿಸದ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದರು.
ಮುಖಂಡರಾದ ಪ್ರಸನ್ನಕುಮಾರ ಸ್ವಾಮಿ, ಎನ್. ಮಂಜುನಾಥ್, ರವಿಕುಮಾರ್ ನಾಯಕ್, ಉರಗಲಿ ಚಲಪತಿ, ರಮೇಶ್ ಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.