ಕೋಲಾರ: ‘ಭಾರತೀಯರ ಆರಾಧ್ಯದೈವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗಿಯಾಗಬೇಕು. ಈ ಕಾರಣಕ್ಕೆ ರಾಮಮಂದಿರ ನಿಧಿ ಸಮರ್ಪಣೆ ಮಾಡಬೇಕು’ ಎಂದು ಬಜರಂಗದಳ ಸದಸ್ಯ ಬಾಲಾಜಿ ಮನವಿ ಮಾಡಿದರು.
ನಗರದ ರಾಮದೇವರ ಗುಡಿಯಲ್ಲಿ ಸೋಮವಾರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಶ್ರೀರಾಮನ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುವುದು ಈ ದೇಶದ ಗೌರವದ ಪ್ರತೀಕ’ ಎಂದು ತಿಳಿಸಿದರು.
‘ಮಂದಿರ ನಿರ್ಮಾಣಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದ್ದು, ದೇಶದ ಪ್ರತಿ ಪ್ರಜೆಯೂ ನಿಧಿ ಸಮರ್ಪಿಸಿ ಈ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೊಡ್ಡಪೇಟೆ, ಕಿಲಾರಿಪೇಟೆ ಸೇರಿದಂತೆ ನಗರದ ಹಲವೆಡೆ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಯಿತು. ಬಜರಂಗದಳ ಸದಸ್ಯರಾದ ಜಗದೀಶ್, ಓಂಪ್ರಕಾಶ್, ಚಿನ್ನಪ್ಪ, ನಾಗರಾಜ್, ಮಹೇಶ್, ಮುನಿವೆಂಕಟ ಯಾದವ್, ಮಂಜುನಾಥ್ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.