ಕುಕನೂರು : ಸಮೀಪದ ಗುದ್ನೇಪ್ಪನಮಠದಲ್ಲಿ ಬುಧವಾರ ಬಣವೆಗೆ ಬೆಂಕಿ ಬಿದ್ದು ಅಪಾರ ಹಾನಿಯಾಗಿದೆ.ವೀರುಪಾಕ್ಷಯ್ಯ ಸಂಗಯ್ಯ ಬ್ಯಾಳಿ ಅವರಿಗೆ ಸೇರಿದ ಬಣವೆಯಾಗಿದ್ದು, ಎರಡು ಟ್ರ್ಯಾಕ್ಟರ್ ನೆಲ್ಲುಹುಲ್ಲು, ನಾಲ್ಕು ಟ್ರ್ಯಾಕ್ಟರ್ ಸೇಂಗಾ ಹೊಟ್ಟು, ಮೂರು ಟ್ರ್ಯಾಕ್ಟರ್ ಜೋಳದ ಮೇವು ಹಾಗೂ ಎರಡು ಟ್ರ್ಯಾಕ್ಟರ್ ಕಡಲೆ ಹೊಟ್ಟು ಬೆಂಕಿಗೆ ಆಹುತಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.ಕಂದಾಯ ನೀರಿಕ್ಷಕ ಶರಣಪ್ಪ ಮುರ್ಲಾಪೂರ, ಬಸವರಾಜ ಇಟಗಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.