ADVERTISEMENT

ರಂಗಭೂಮಿ ವಿಸ್ತಾರಕ್ಕೆ ‘ವಿಸ್ತಾರ್‌’ ಸಹಕಾರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 15:52 IST
Last Updated 14 ಅಕ್ಟೋಬರ್ 2018, 15:52 IST
ಭಾಗ್ಯನಗರದ ಜ್ಞಾನಬಂಧು ವಿದ್ಯಾ ಸಂಸ್ಥೆ ಆವರಣದಲ್ಲಿ ಶನಿವಾರ ವೆಣ್ಣಿಲಾ ಹಾಲ್ಕುರಿಕೆ ರಚಿತ, ಗುರುರಾಜ ಹೊಸಪೇಟೆ ನಿರ್ದೇಶನದ ‘ದೇವತಾಪುರದ ಮಕ್ಕಳು’ ಮಕ್ಕಳ ನಾಟಕ ಪ್ರದರ್ಶನ ನಡೆಯಿತು
ಭಾಗ್ಯನಗರದ ಜ್ಞಾನಬಂಧು ವಿದ್ಯಾ ಸಂಸ್ಥೆ ಆವರಣದಲ್ಲಿ ಶನಿವಾರ ವೆಣ್ಣಿಲಾ ಹಾಲ್ಕುರಿಕೆ ರಚಿತ, ಗುರುರಾಜ ಹೊಸಪೇಟೆ ನಿರ್ದೇಶನದ ‘ದೇವತಾಪುರದ ಮಕ್ಕಳು’ ಮಕ್ಕಳ ನಾಟಕ ಪ್ರದರ್ಶನ ನಡೆಯಿತು   

ಕೊಪ್ಪಳ: ‘ವಿಸ್ತಾರ’ ರಂಗ ಕಾರ್ಯಕ್ರಮಗಳು ಆಂತರಿಕ ಹಾಗೂ ಬಾಹ್ಯ ರಂಗಭೂಮಿ ವಿಸ್ತಾರಗೊಳಿಸುತ್ತವೆ ಎಂದು ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು.

ಭಾಗ್ಯನಗರದ ಜ್ಞಾನಬಂಧು ವಿದ್ಯಾ ಸಂಸ್ಥೆ ಆವರಣದಲ್ಲಿ ಶನಿವಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಚಿಣ್ಣರ ಚಿಲುಮೆ’ ಯೋಜನೆಯ ಅಡಿ ‘ದೇವತಾಪುರದ ಮಕ್ಕಳು’ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ನಾಟಕವನ್ನು ವೆಣ್ಣಿಲಾ ಹಾಲ್ಕುರಿಕೆ ರಚಿಸಿದ್ದಾರೆ. ಗುರುರಾಜ ಹೊಸಪೇಟೆ ನಿರ್ದೇಶಿಸಿದ್ದಾರೆ.

ADVERTISEMENT

ಜ್ಞಾನಬಂಧು ವಿದ್ಯಾ ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು, ರಂಗನಿರ್ದೇಶಕ ಶಿವಶಂಕರ್ ಹಾಲ್ಕುರಿಕೆ, ತಿರುಗಾಟದ ಸಂಯೋಜಕ ಲಕ್ಷ್ಮಣ ಪಿರಗಾರ, ಸುಂಕಪ್ಪ ಮೀಸಿ,ರೇಣುಕಾ ಹೊನ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.