ADVERTISEMENT

ಗಂಗಾವತಿ: ಆಟೊ–ಲಾರಿ ಡಿಕ್ಕಿಯಾಗಿ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 6:42 IST
Last Updated 30 ಮಾರ್ಚ್ 2021, 6:42 IST

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ-ಕೊಪ್ಪಳ ಮುಖ್ಯರಸ್ತೆಯ ಮುಕ್ಕುಂಪಿ ಕ್ರಾಸ್ ಬಳಿ ಭಾನುವಾರ ರಾತ್ರಿ ಆಟೊರಿಕ್ಷಾ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಗ್ರಾಮದ ಫಕೀರಪ್ಪ (30), ಭೀಮಣ್ಣ (35) ಹಾಗೂ ರಾಮಣ್ಣ ಮೃತರು. ರೈತ ಮಂಜುನಾಥ ಜಬ್ಬಲಗುಡ್ಡ (28) ಎಂಬುವರಿಗೆ ಗಾಯಗಳಾಗಿವೆ.

ಮಂಜುನಾಥ ಜಬ್ಬಲಗುಡ್ಡ ಅವರ ತೋಟದಲ್ಲಿ ಬೆಳೆದಿದ್ದ ಶೇಂಗಾವನ್ನು ರಾಶಿ ಮಾಡಿ, ಆಟೊದಲ್ಲಿ ಗಂಗಾವತಿ ಮಾರುಕಟ್ಟೆಗೆ ಒಯ್ಯಲಾಗಿತ್ತು. ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.