ಗಂಗಾವತಿ: ತಾಲ್ಲೂಕಿನ ಆನೆಗೊಂದಿ ನವವೃಂದಾವನ ಗಡ್ಡೆಯಲ್ಲಿ ಶುಕ್ರವಾರ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಕವಿಂದ್ರ ತೀರ್ಥರ ಪೂರ್ವಾರಾಧನೆ ನೆರವೇರಿಸಿದರು.
ನಂತರ ಕವಿಂದ್ರ ತೀರ್ಥರ ಮೂಲ ವೃಂದಾವನಕ್ಕೆ ವಿಶೇಷ ಫಲ, ಪಂಚಾಮೃತ ಅಭಿಷೇಕ ಅಲಂಕಾರ ನೆರವೇರಿಸಿದರು. ಶ್ರೀಮನ್ಮೂಲ ರಾಮದೇವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಹೈಕೋರ್ಟ್ ಆದೇಶದ ಹಿನ್ನಲೆ ಯಲ್ಲಿ ಮಂತ್ರಾಲಯ ಮಠದಿಂದ ಪೂರ್ವರಾಧನೆ ನಡೆದಿದ್ದು, ಭಕ್ತರಿಗೆ ಮುಧ್ರಧಾರಣ, ಫಲ ಮಂತ್ರಾಕ್ಷತೆ ನೀಡಿ ಅರ್ಶಿವಾದಿಸಲಾಯಿತು. ಡಾ.ವಾದಿರಾಜಾಚಾರ್, ಪಂಡಿತರಾದ ನರಹರಿಯ ಚಾರ್ಟ್ ವೆಂಕಟೇಶ ಆಚಾರ್, ಸುಳಾದಿ ಹನುಮೇಶ ಆಚಾರ್, ಬೆಂಗಳೂರಿನ ಶ್ರೀನಿಧಿ ಆಚಾರ್, ಸುರೇಶ್, ರಾಮಕೃಷ್ಣ ತಿರುಮಲೇಶ, ಉದಯ್ ಜಾಗಿರ್ದಾರ್, ಶ್ರೀನಿವಾಸ, ಸುದೀಪ ಆದಾಪುರ, ಬದ್ರಿ ಡಣಾಪುರ, ಶ್ರೀನಿವಾಸ ಡಣಾಪುರ, ಮೋಹಿತ್ ಅಯೋಧ್ಯ ಸೂರಜ್ ಹೇರೂರ, ಪ್ರಸನ್ನ ನವಲಹಳ್ಳಿ, ಆದಾಪೂರ ವಿಷ್ಣು, ಸಂಜೀವ್ ಕುಲಕರ್ಣಿ, ನರಸಿಂಹಾಚಾರ್, ಶ್ರೀನಿವಾಸಾಚಾರ್, ಸುಮಂತ ಕುಲಕರ್ಣಿ ಇದ್ದರು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.