ಕೊಪ್ಪಳ: ‘ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗಿದ್ದು, ಇದಕ್ಕೆ ಎಲ್ಲಾ ನಿರ್ದೇಶಕರ, ಷೇರುದಾರರ, ಗ್ರಾಹಕರ ಮತ್ತು ಸಿಬ್ಬಂದಿ ಸಹಕಾರ ಕಾರಣ’ ಎಂದು ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಜಶೇಖರಗೌಡ ಎಂ.ಆಡೂರ ಹೇಳಿದರು.
ಶಿವಶಾಂತವೀರ ಮಂಗಲ ಭವನದಲ್ಲಿ ನಡೆದ ಬ್ಯಾಂಕ್ನ 89ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ ‘ಬ್ಯಾಂಕಿಗೆ ಸಾಕಷ್ಟು ಪೈಪೋಟಿ ಹಾಗೂ ಹಲವಾರು ಒತ್ತಡಗಳು ಇದ್ದರೂ ಅವುಗಳನ್ನು ನಿಭಾಯಿಸಿ ಪೈಪೋಟಿ ಎದುರಿಸಿದ್ದೇವೆ. ಬ್ಯಾಂಕ್ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ’ ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಶಿ, ಮಾರಾಟ ಅಧಿಕಾರಿ ಮಲ್ಲಿಕಾರ್ಜುನ ಸಿದ್ನೇಕೊಪ್ಪ,
ಹಿರಿಯರಾದ ನೀಲಕಂಠಯ್ಯ ಹಿರೇಮಠ, ನಾಗರಾಜ ಬಳ್ಳಾರಿ, ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಶಹಪೂರ, ವಿಶ್ವನಾಥ ಜಿ ಅಗಡಿ, ಗವಿಸಿದ್ದಪ್ಪ ಸಿ. ತಳಕಲ್, ರಾಜೇಂದ್ರ ಕುಮಾರ ಎಸ್. ಶೆಟ್ಟರ್, ಶಿವರಡ್ಡಿ ಭೂಮಕ್ಕನವರ, ಶಿವಕುಮಾರ ಶೆಟ್ಟರ್ , ರಮೇಶ ಕವಲೂರ, ನಾಗರಾಜ ಅರಕೇರಿ, ಸೈಯದಾ ಶೈನಾಜಬೇಗಂ, ಸುಮಂಗಲಾ ಸೋಮಲಾಪೂರ ಹಾಗೂ ಜಯಶ್ರೀ ಬಬಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.