ADVERTISEMENT

ಹತಾಶೆಯಿಂದ ಎಚ್.ವಿಶ್ವನಾಥ್ ಆರೋಪ: ಬಿ.ಸಿ.‍ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 2:59 IST
Last Updated 20 ಜೂನ್ 2021, 2:59 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಕೊಪ್ಪಳ: ‘ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಹತಾಶೆಯಿಂದ ಸಿಎಂವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದು ಸರಿ ಅಲ್ಲ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

‘ಮೂಲ ಹಾಗೂ ವಲಸೆ ಬಿಜೆಪಿ ಅನ್ನೋದು ಇಲ್ಲ ಎಂದು ಸ್ವತಃ ಸಚಿವರಾದ ಕೆ.ಎಸ್. ಈಶ್ವರಪ್ಪನವರೇ ಹೇಳಿದ್ದಾರೆ. ನಾವು ಒಮ್ಮೆ ಪಕ್ಷಕ್ಕೆ ಬಂದು ಜನಾಭಿಪ್ರಾಯ ಪಡೆದು ಸಚಿವರಾಗಿದ್ದೇವೆ. ಬಿಜೆಪಿಯೆಂಬ ಮನೆಗೆ ನಾವು ಸೊಸೆಯಾಗಿ ಮೊಳೆ ಹೊಡೆದುಕೊಂಡು ಬಂದು ಮನೆ ಮಗಳಾಗಿದ್ದೇವೆ. ಬಿಜೆಪಿಯೇ ನಮ್ಮತವರು ಮನೆ’ ಎಂದು ಶನಿವಾರ ಇಲ್ಲಿ ಪ್ರತಿಕ್ರಿಯಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,‘ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ, ಬೇರೆಯವರ ತಟ್ಟೆಯಲ್ಲಿಯ ನೊಣದ ಕುರಿತು ಮಾತನಾಡುತ್ತಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.