ADVERTISEMENT

ಅಂಗವಿಕಲರ ಆರೈಕೆ ಪುಣ್ಯದ ಕೆಲಸ: ಲತಾ ಗವಿಸಿದ್ಧಪ್ಪ ಚಿನ್ನೂರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 12:24 IST
Last Updated 5 ಜುಲೈ 2021, 12:24 IST
ಕೊಪ್ಪಳದ ಸಮೂಹ ಸಂಸ್ಥೆ ಹಾಗೂ ಕೇರರ್ಸ್ ವರ್ಲ್ಡ್‌ವೈಡ್ ಸಹಭಾಗಿತ್ವದಲ್ಲಿ ನಗರದ ಸಮೂಹ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ತೀವ್ರ ಪ್ರಮಾಣದ ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರಿಗೆ ಆಹಾರ ಸಾಮಗ್ರಿಯನ್ನು ನಗರಸಭೆ ಅಧ್ಯಕ್ಷತೆ ಲತಾ ಚಿನ್ನೂರು ವಿತರಿಸಿದರು
ಕೊಪ್ಪಳದ ಸಮೂಹ ಸಂಸ್ಥೆ ಹಾಗೂ ಕೇರರ್ಸ್ ವರ್ಲ್ಡ್‌ವೈಡ್ ಸಹಭಾಗಿತ್ವದಲ್ಲಿ ನಗರದ ಸಮೂಹ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ತೀವ್ರ ಪ್ರಮಾಣದ ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರಿಗೆ ಆಹಾರ ಸಾಮಗ್ರಿಯನ್ನು ನಗರಸಭೆ ಅಧ್ಯಕ್ಷತೆ ಲತಾ ಚಿನ್ನೂರು ವಿತರಿಸಿದರು   

ಕೊಪ್ಪಳ: ‘ಅಂಗವಿಕಲರ ಆರೈಕೆ ಮಾಡುವುದು ಪುಣ್ಯದ ಕೆಲಸ’ ಎಂದು ನಗರಸಭೆ ಅಧ್ಯಕ್ಷ ಲತಾ ಗವಿಸಿದ್ಧಪ್ಪ ಚಿನ್ನೂರು ತಿಳಿಸಿದರು.

ಸಮೂಹ ಸಂಸ್ಥೆ ಹಾಗೂ ಕೇರರ್ಸ್ ವರ್ಲ್ಡ್‌ವೈಡ್ ಸಹಭಾಗಿತ್ವದಲ್ಲಿ ನಗರದ ಸಮೂಹ ಕ್ಯಾಂಪ್‌ನಲ್ಲಿ ಶನಿವಾರ ನಡೆದ ತೀವ್ರ ಪ್ರಮಾಣದ ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರಿಗೆ ಆಹಾರ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬುದ್ಧಿಮಾಂಧ್ಯ ಹಾಗೂ ಇತರ ಹೆಚ್ಚಿನ ಅಂಗವಿಕಲತೆ ಇರುವ ಆರೈಕೆ ಮಾಡುವುದು ಕಷ್ಟದ ಕೆಲಸ. ಕೋವಿಡ್ ಸಂದರ್ಭದಲ್ಲಿ ಅಂಗವಿಕಲರಿಗೆ ನೆರವಾಗಲು ಸರ್ಕಾರಕ್ಕೆ ಕೋರಲಾಗಿದೆ ಎಂದು ತಿಳಿಸಿದರು.

ADVERTISEMENT

ಸಂಸ್ಥೆಯಸಂಚಾಲಕರಾಗಿರುವಬಿ.ಹಂಪಣ್ಣ ಮಾತನಾಡಿ,‘ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಅಂಗವಿಕಲರಿಗೆ ಹಾಗೂ ಆರೈಕೆದಾರರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದೆ. ಸಂಸ್ಥೆಯ ಬೆಂಬಲದಿಂದ ಜಿಲ್ಲೆಯ 187 ಆರೈಕೆದಾರರ ಕುಟುಂಬಗಳನ್ನು ಗುರುತಿಸಲಾಗಿದ್ದು, ಇನ್ನೆರೆಡು ದಿನಗಳಲ್ಲಿ ಆಹಾರ ಸಾಮಗ್ರಿ ವಿತರಿಸಲಾಗುವುದು’ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಮಾತನಾಡಿ,‘ಕೋವಿಡ್ ಸಂದರ್ಭದಲ್ಲಿ ವಿವಿಧ ದಾನಿಗಳು ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಆಹಾರ ಧಾನ್ಯ ಕಿಟ್ ನೀಡಿ ನೆರವಾಗಿದ್ದಾರೆ’ ಎಂದರು.

ಸಂಸ್ಥೆಯ ವ್ಯವಸ್ಥಾಪಕ ಎಚ್.ಎನ್.ಬಸಪ್ಪ, ಸಿಬ್ಬಂದಿ ಪ್ರಭಾಕರ, ಪ್ರಸಾದ, ಈರಮ್ಮ, ಮಲಿಯಮ್ಮ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.