
ಪ್ರಜಾವಾಣಿ ವಾರ್ತೆಕೊಪ್ಪಳ:ಜಿಲ್ಲೆಯಲ್ಲಿ ಭಾನುವಾರ4 ಜನರು ಕೋವಿಡ್ನಿಂದ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
152ಜನರಿಗೆ ಸೋಂಕು ಇರುವುದು ಪತ್ತೆ ಮಾಡಲಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ 50, ಕೊಪ್ಪಳದಲ್ಲಿ 40, ಕುಷ್ಟಗಿಯಲ್ಲಿ 39, ಯಲಬುರ್ಗಾದಲ್ಲಿ23 ಪ್ರಕರಣ ಪತ್ತೆಯಾಗಿದೆ. 44 ಜನರನ್ನು ತೀವ್ರ ಸೋಂಕಿನ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.
169ಜನರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು9221 ಪ್ರಕರಣ ವರದಿಯಾಗಿದ್ದು, ಇಲ್ಲಿಯವರೆಗೆ7226 ಜನರು ಗುಣಮುಖರಾಗಿದ್ದಾರೆ. ಸಾಮೂಹಿಕ ಕೋವಿಡ್ ಪರೀಕ್ಷೆ ಚುರುಕುಗೊಳಿಸಿದ್ದು, ಹೋಬಳಿಮಟ್ಟದಲ್ಲಿ ಸಂಚಾರಿ ವಾಹನಗಳು ಕಾರ್ಯ ನಿರ್ವಹಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.