ತಾವರಗೇರಾ: ಕಳ್ಳರು ಹಾಗಲಕಾಯಿ ಕಿತ್ತುಕೊಂಡು ಹೋಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಮೀಪದ ಬಚನಾಳ ಗ್ರಾಮದ ರೈತ ಪಂಪಯ್ಯ ಅವರ ಹೊಲಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಭಾನುವಾರ ಭೇಟಿ ನೀಡಿದರು. ₹10 ಸಾವಿರ ವೈಯಕ್ತಿಕ ಪರಿಹಾರ ನೀಡಿದರು.
ಈ ಸಂಬಂಧ ‘ಪ್ರಜಾವಾಣಿ’ಯ ಜುಲೈ 11 ರ ಸಂಚಿಕೆಯಲ್ಲಿ ‘ಬಚನಾಳ: ಹಾಗಲಕಾಯಿ ಕಳವು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ,‘ರೈತರ ಬೆಳೆ ಕಿತ್ತುಕೊಂಡು ಹೋಗಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ರೈತರು ಕಷ್ಟಪಟ್ಟು ಸಾಲ ಮಾಡಿ ಬೆಳೆ ಬೆಳೆದಿರುತ್ತಾರೆ. ಇಂಥ ಘಟನೆಗಳಿಂದ ಅವರ ಕುಟುಂಬಕ್ಕೆ ನಷ್ಟವಾಗುತ್ತಿದೆ. ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.
ರೈತ ಪಂಪಯ್ಯ, ಮರಿಯಪ್ಪ ವಕೀಲ ಹಾಗೂ ಲಿಂಗದಹಳ್ಳಿ ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.