ADVERTISEMENT

ಗಂಗಾವತಿ: ಹೇಮಗುಡ್ಡ ದುರ್ಗಾದೇವಿಯ ಅಂಬಾರಿ ಹೊರುವ ಆನೆ ‘ಸುಧಾ’ ಸಾವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 4:39 IST
Last Updated 16 ನವೆಂಬರ್ 2021, 4:39 IST
ಅಂಬಾರಿ ಹೊತ್ತಿರುವ ಹೆಣ್ಣು ಅನೆ ಸುಧಾ (ಸಂಗ್ರಹ ಚಿತ್ರ)
ಅಂಬಾರಿ ಹೊತ್ತಿರುವ ಹೆಣ್ಣು ಅನೆ ಸುಧಾ (ಸಂಗ್ರಹ ಚಿತ್ರ)   

ಗಂಗಾವತಿ: ದಸಾರ ಉತ್ಸವದಲ್ಲಿ ತಾಲ್ಲೂಕಿನ ಹೇಮಗುಡ್ಡ ದುರ್ಗಾದೇವಿಯ ಅಂಬಾರಿ ಹೊರುವ ಹೆಣ್ಣು ಅನೆ ಸುಧಾ ಆನಾರೊಗ್ಯದಿಂದ ಸೋಮವಾರ ಬೆಳಗಾವಿಯಲ್ಲಿ ಮೃತಪಟ್ಟಿದೆ.

ಈ ಆನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚಿಪ್ಪಲಕಟ್ಟಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ್ದಾಗಿತ್ತು.

ಮಾಜಿ ಸಂಸದ ಎಚ್.ಜಿ.ರಾಮುಲು ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಹೇಮಗುಡ್ಡ ದುರ್ಗಾದೇವಿಯ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವ ಮೂಲಕ ಈ ಭಾಗದಲ್ಲಿ ಮೈಸೂರು ದಸಾರವನ್ನು ನೆನಪು ಮಾಡುತ್ತಿತ್ತು.ಪ್ರತಿ ವರ್ಷ ದಸರಾ ಉತ್ಸವಕ್ಕೆ ಸುಧಾ ಎಂಬ ಹೆಣ್ಣು ಆನೆ, ಹೇಮಗುಡ್ಡಕ್ಕೆ ಆಗಮಿಸಿ, ಏಳು ದಿನ ಇಲ್ಲಿ ನಡೆಯುವ ವಿಶೇಷ ಪೂಜೆಗಳಿಗೆ ಸಾಕ್ಷಿಯಾಗಿ ಭಕ್ತರಿಗೆ ಹಾಗೂ ಮಾಜಿ ಸಂಸದ ಎಚ್.ಜಿ.ರಾಮುಲು ಕುಟುಂಬಕ್ಕೆ ಆರ್ಶಿವಾದ ನೀಡುವುದು ವಾಡಿಕೆ. ಎಚ್.ಜಿ ರಾಮುಲು ಕುಟುಂಬಕ್ಕೂ, ಈ ಸುಧಾ ಆನೆ ಒಡೆತನ ಕುಟುಂಬಕ್ಕೂ ವಿಶೇಷ ನಂಟೂ. ಈ ಆನೆಯ ಮೂಲಕವೇ ಹೇಮಗುಡ್ಡ ದುರ್ಗಾದೇವಿ ದೇವಸ್ಥಾನದಲ್ಲಿ ದಸಾರ ಹಬ್ಬದ ವೈಭವ ಸಾರುತ್ತಿದ್ದರು. ಎರಡು ತಿಂಗಳಿಂದ ಆನೆಗೆ ಕಾಲು ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ನೀಡಲಾಗುತ್ತಿತ್ತು. 20 ದಿನಗಳ ಹಿಂದೆ ಗಾಯವಾಗಿ, ಗ್ಯಾಂಗರೀನ್‌ಗೆ ತುತ್ತಾಗಿ, ಬೆಳಗಿನ ಜಾವ 4 ಗಂಟೆಗೆ ಸಾವನ್ನಪ್ಪಿತು. ಚಿಪ್ಪಲಕಟ್ಟಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನ ಹಿಂಬದಿಯಲ್ಲಿ ಅಂತ್ಯಕ್ರಿಯೆ ಮಾಡಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಸಂಸದ ಎಚ್.ಜಿ ರಾಮುಲು, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ ಕುಟುಂಬ ಅಶ್ರುತರ್ಪಣ ಅರ್ಪಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.