ADVERTISEMENT

ಗಂಗಾವತಿ ಡಿವೈಎಸ್‌ಪಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:07 IST
Last Updated 7 ಅಕ್ಟೋಬರ್ 2025, 5:07 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಕೊಪ್ಪಳ: ಜಿಲ್ಲೆಯ ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ (ಸಿವಿಲ್‌) ಸಿದ್ದಲಿಂಗಪ್ಪಗೌಡ ಪಾಟೀಲ ಅವರನ್ನು ಹೊಸದಾಗಿ ಸೃಜನೆಯಾದ ಬೆಂಗಳೂರಿನ ಎ.ಎನ್‌.ಟಿ.ಎಫ್‌ಗೆ ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಆದೇಶಿಸಿದೆ.

ಕೊಪ್ಪಳದ ಸೈಬರ್‌ ಕ್ರೈಂನ ಡಿವೈಎಸ್‌ಪಿ ಯಶವಂತಕುಮಾರ್‌ ಎಸ್‌.ಬಿ. ಅವರನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುದ ಬೀದರ್ ಜಿಲ್ಲೆ ಹುಮನಾಬಾದ್ ಉಪವಿಭಾಗದ ಡಿವೈಎಸ್‌ಪಿಯಾಗಿರುವ ಜಾಯಪ್ಪ ನ್ಯಾಮಗೌಡರ್ ಅವರನ್ನು ಗಂಗಾವತಿಗೆ ವರ್ಗಾಯಿಸಲಾಗಿದೆ.    

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.