ADVERTISEMENT

ಕೊಪ್ಪಳ: ಅಜ್ಜನ ಜಾತ್ರೆಗೆ 11 ಸಾವಿರ ಶೇಂಗಾ ಹೋಳಿಗೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:59 IST
Last Updated 1 ಜನವರಿ 2026, 5:59 IST
ಕನಕಗಿರಿ ತಾಲ್ಲೂಕಿನ ಓಬಳಬಂಡಿ ಗ್ರಾಮಸ್ಥರು ಶ್ರೀ ಗವಿಸಿದ್ದೇಶ್ವರ ಜಾತ್ರೆಯ ದಾಸೋಹಕ್ಕೆ ಬುಧವಾರ 11 ಸಾವಿರ ಶೇಂಗಾ ಹೋಳಿಗೆ, ರೊಟ್ಟಿ, ದವಸ ಧಾನ್ಯಗಳ ದೇಣಿಗೆಯನ್ನು ನೀಡಿದರು
ಕನಕಗಿರಿ ತಾಲ್ಲೂಕಿನ ಓಬಳಬಂಡಿ ಗ್ರಾಮಸ್ಥರು ಶ್ರೀ ಗವಿಸಿದ್ದೇಶ್ವರ ಜಾತ್ರೆಯ ದಾಸೋಹಕ್ಕೆ ಬುಧವಾರ 11 ಸಾವಿರ ಶೇಂಗಾ ಹೋಳಿಗೆ, ರೊಟ್ಟಿ, ದವಸ ಧಾನ್ಯಗಳ ದೇಣಿಗೆಯನ್ನು ನೀಡಿದರು   

ಕನಕಗಿರಿ: ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ತಾಲ್ಲೂಕಿನ ಓಬಳಬಂಡಿ ಗ್ರಾಮದವರು 11 ಸಾವಿರ ಶೇಂಗಾ ಹೋಳಿಗೆ,ರೊಟ್ಟಿ, ದವಸ ಧಾನ್ಯಗಳ ದೇಣಿಗೆಯನ್ನು ವಾಹನ ಮೂಲಕ ಕೊಪ್ಪಳದ ಗವಿಮಠಕ್ಕೆ ಕಳಿಸಿದರು.

ಮುಖಂಡ ನಾಗನಗೌಡ ಮಾತನಾಡಿ, ‘ಪ್ರತಿ ವರ್ಷದಂತೆ ಈ ವರ್ಷವು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಗ್ರಾಮದ ವತಿಯಿಂದ ರೊಟ್ಟಿ, ಮಾದಲಿ, ತುಪ್ಪ ನೀಡಲಾಗುತ್ತಿತ್ತು, ಆದರೆ ಇದೇ ಸಲ 11 ಸಾವಿರ ಶೇಂಗಾ ಹೋಳಿಗೆ ತಯಾರು ಮಾಡಿ ಕಳಿಸುತ್ತಿದೇವೆ. ಈ ಕಾರ್ಯಕ್ಕೆ ಪುರುಷರು, ಮಹಿಳೆಯರು, ಮಕ್ಕಳು ಕೈ ಜೋಡಿಸಿದ್ದಾರೆ ಎಂದರು.

ಗ್ರಾಮಸ್ಥರಾದ ಹನುಮಂತಪ್ಪ ಇಂದರಗಿ, ಗುರುಬಸಪ್ಪ ಬಂಡಿ, ಬೆಟ್ಟಪ್ಪ ಹುಳ್ಳಿ, ಸುರೇಶ ಮಾಲೀಪಾಟೀಲ್, ರವಿ ಮಾದಿನಾಳ, ಮಂಜುನಾಥ ಸುಳೇಕಲ್, ಮಲ್ಲಪ್ಪ ಮನ್ನಾಪುರ, ದೇವಪ್ಪ ಪೂಜಾರ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.