ADVERTISEMENT

ಕಸಾಪ: ನಿಂಗೋಜಿ, ಮಹೇಶ ಜೋಶಿ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:29 IST
Last Updated 19 ಏಪ್ರಿಲ್ 2021, 4:29 IST
ಗಂಗಾವತಿ ತಾಲ್ಲೂಕಿನ ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಯಿತು
ಗಂಗಾವತಿ ತಾಲ್ಲೂಕಿನ ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಯಿತು   

ಗಂಗಾವತಿ: ‘ಕನ್ನಡ ಭಾಷೆ, ನೆಲ–ಜಲ ಕನ್ನಡಿಗರ ಸ್ವಾಭಿಮಾನದಿಂದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿತವಾಗಿದೆ. ಕೆಲವರು ಇಲ್ಲಿ ಜಾತಿ ಬಣ‌ಗಳನ್ನು ಮಾಡುವ ಮೂಲಕ ಕಸಾಪಕ್ಕೆ ಕಳಂಕ ತಂದಿದ್ದಾರೆ. ಇದನ್ನು ದೂರ ಮಾಡಲು ವೀರಣ್ಣ ನಿಂಗೋಜಿ ಹಾಗೂ ನಾಡೋಜ ಡಾ.ಮಹೇಶ ಜೋಶಿ ಅವರನ್ನು ಗೆಲ್ಲಿಸಬೇಕು ಎಂದು ವಿಜಯನಗರ ವಿಶ್ವವಿದ್ಯಾಲಯ ಆಡಳಿತ ಮಂಡಳಿ ನಿರ್ದೇಶಕ ಶಿವಾನಂದ ಮೇಟಿ ಹಾಗೂ ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಅಜಮೀರ್ ನಂದಾಪೂರ ಹೇಳಿದರು.

ತಾಲ್ಲೂಕಿನ ಮರಳಿ ಹೋಬಳಿಯ ಢಣಾಪೂರ, ಜಂಗಮರಕಲ್ಗುಡಿ ಮತ್ತು ಆಚಾರನರಸಾಪೂರ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದರು.

‘ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಕಸಾಪ ಕಾರ್ಯ ಚಟುವಟಿಕೆ ಏಕವ್ಯಕ್ತಿ ಪ್ರಧಾನವಾಗಿದ್ದು, ಕಸಾಪ ಮೂಲಕ ರಾಜಕೀಯ ಮಾಡಲಾಗುತ್ತಿದೆ. ತಾಲ್ಲೂಕು ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಕಾಟಚಾರಕ್ಕೆ ನಡೆಸಲಾಗುತ್ತಿದೆ. ಸಮ್ಮೇಳನದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಸಂಪ್ರದಾಯ ಕೈ ಬಿಡಲಾಗಿದೆ. ತಮ್ಮ ಹಿಂಬಾಲಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ‌ ಸಾಹಿತಿಗಳು, ‌ಲೇಖಕರು,‌ ಬರಹಗಾರರನ್ನು ಹಾಗೂ ಕಸಾಪ ಆಜೀವ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗಿದೆ’ ಎಂದರು.

ADVERTISEMENT

ಕಸಾಪ ಅಜೀವ ಸದಸ್ಯರಾದ ಕೆ.ನಿಂಗಜ್ಜ, ನವಲಿ ರಾಮಮೂರ್ತಿ, ಸಿಂಗನಾಳ ಕುಮಾರಪ್ಪ, ಡಗ್ಗಿ ಹನುಮಂತಪ್ಪ, ಎಂ.ಶರಣಪ್ಪ, ನ್ಯಾಯವಾದಿ ಸುಭಾಸ ತಿಪಶೆಟ್ಟಿ, ಅಯ್ಯಣ್ಣ, ಟೀಕಯ್ಯ, ಹೊನ್ನೂರಪ್ಪ ಹಾಗೂ ವೈ.ಆನಂದರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.