ಹಣವಾಳ (ಗಂಗಾವತಿ): ‘ಜಿಲ್ಲೆಯಲ್ಲಿ ಕಸಾಪದ ಮೂಲ ಉದ್ದೇಶ ಈಡೇರಬೇಕಾದರೆ ಆಜೀವ ಸದಸ್ಯರು ವೀರಣ್ಣ ನಿಂಗೋಜಿಗೆ ಮತ ನೀಡಬೇಕು’ ಎಂದು ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಗೌರವ ಕಾರ್ಯದರ್ಶಿ ಶಿವಾನಂದ ಮೇಟಿ ಮನವಿ ಮಾಡಿದರು.
ತಾಲ್ಲೂಕಿನ ಹಣವಾಳ ಗ್ರಾಮದಲ್ಲಿ ಭಾನುವಾರ ನಡೆದ ಕಸಾಪ ಆಜೀವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
‘ದತ್ತಿನಿಧಿ, ಕಾವ್ಯಕಮ್ಮಟ, ಸಾಹಿತ್ಯ ಸಮ್ಮೇಳನ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಬೇಕು. ಕೆಲವರು ಕಸಾಪವನ್ನು ತಾವು ಬೆಳೆಯಲು ಬಳಕೆ ಮಾಡಿಕೊಂಡಿದ್ದಾರೆ. ಜಾತಿ, ಸ್ವಜನ ಪಕ್ಷಪಾತ ಮಾಡಿ ಕಸಾಪ ಹೆಸರು ಕೆಡಿಸಿದ್ದಾರೆ. ಇದನ್ನು ಸರಿಪಡಿಸಲು ವೀರಣ್ಣ ನಿಂಗೋಜಿ ಯಂಥ ಸರಳ ವ್ಯಕ್ತಿಯ ಅವಶ್ಯಕತೆ ಇದೆ. ಕೊಪ್ಪಳಕ್ಕೆ ವೀರಣ್ಣ ನಿಂಗೋಜಿ, ರಾಜ್ಯಕ್ಕೆ ನಾಡೋಜ ಡಾ.ಮಹೇಶ ಜೋಶಿ ಅವರನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಕುಮಾರೆಪ್ಪ ಸಿಂಗನಾಳ, ಮಹಾಲಿಂಗಪ್ಪ, ಶಿವಾನಂದ ಬೆನಕನಾಳ, ಕಸಾಪ ಆಜೀವ ಸದಸ್ಯರಾದ ವಿರೇಶಪ್ಪ ಮಾಲಿ ಪಾಟೀಲ, ಎಚ್.ಬಸವನಗೌಡ, ಜಗದೀಶ, ವೀರೇಶಪ್ಪ ಸಿದ್ದಾಪುರ, ಶಿವಪ್ಪ ದಾನಶೆಟ್ಟಿ, ಬಸವರಾಜ ಹಣವಾಳ, ಶಿವಮೂರ್ತಿ ಹಣವಾಳ, ವೀರಭದ್ರಗೌಡ ಆರ್ಹಾಳ, ಶರಣಪ್ಪ ನಡಲಮನಿ, ಯಂಕರೆಡ್ಡಿ ಹೇರೂರು ಮೋದಿ ಹಾಗೂ ಶರಣಪ್ಪ ಡಣಾಪೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.