ಕೊಪ್ಪಳ: ‘ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾರಸ್ವತ ಲೋಕದ ಪ್ರಾತಿನಿಧಿಕ ಸಂಸ್ಥೆ. ಅದನ್ನು ಜನರ ಬಳಿಗೆ ಕೊಂಡೊಯ್ದು ಇನ್ನಷ್ಟು ಜನಮುಖಿಯಾಗಿಸುತ್ತೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಹನುಮಂತಪ್ಪ ಅಂಡಗಿ ಹೇಳಿದರು.
ಸಾಹಿತ್ಯಕ ವಾತಾವರಣದಿಂದ ದೂರಸರಿದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತ್ಯಕ ಚಟುವಟಿಕೆಗಳ ಕೇಂದ್ರವನ್ನಾಗಿಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಬಳಿಗೆ ಕೊಂಡೊಯ್ಯಲು ನನಗೆ ಮತ ನೀಡಬೇಕು. ನುಡಿಯಲ್ಲಿ ನಿಷ್ಠುರತೆ, ಸಜ್ಜನಿಕೆಯ ನಡೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡಿರುವ ನನ್ನ ವ್ಯಕ್ತಿತ್ವ ಪರಿಷತ್ತಿನ ಘನತೆಗೆ ತಕ್ಕುದ್ದಾಗಿದೆ. ನನಗೆ ಸರ್ಕಾರ ಸಾಕಷ್ಟು ವೇತನ ನೀಡುತ್ತಿದೆ ಎಂದರು. ಎಸ್.ಎ.ಗಫಾರ, ಎಸ್.ಎಂ.ಕಂಬಾಳಿಮಠ, ನಾಗರಾಜ ಗುರಿಕಾರ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.