ಗಂಗಾವತಿ: ‘ಸರಳವಾಗಿ ಕವನ ರಚಿಸಬೇಕು’ ಎಂದು ಹಿರಿಯ ಸಾಹಿತಿ ರುದ್ರಮ್ಮ ಹಾಸಿನಾಳ ಸಲಹೆ ನೀಡಿದರು.
ನಗರದ ಭುವನೇಶ್ವರಿ ಭವನದಲ್ಲಿ ಕಾವ್ಯಲೋಕ ಸಂಘಟನೆಯು ಅಖಿಲ ಕರ್ನಾಟಕ ಹರಿಹರ (ಹಕ್ಕ) ಬುಕ್ಕ ನಾಯಕ ಮಹಾವೇದಿಕೆ ಸಹಯೋಗದಲ್ಲಿ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ ಮತ್ತು ವಿಜಯನಗರ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 96ನೇ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಕವಿ-ಕವಿಯತ್ರಿಯರು ಜನಪರ ಸಾಹಿತ್ಯವನ್ನು ಮೈಗೂಡಿಸಿಗೊಳ್ಳಬೇಕು. ಜನಪರ ಸಾಹಿತ್ಯ ಓದುಗರಿಗೆ ಬೇಗ ತಲುಪುತ್ತದೆ ಎಂದರು.
ನಿವೃತ್ತ ಮುಖ್ಯೋಪಾಧ್ಯಯ ಬಸವರಾಜ ಮ್ಯಾಗಳಮನಿ ಮಾತನಾಡಿದರು.
ಮಂಜುಳಾ ಶ್ಯಾವಿ, ಸುರೇಶ ಜಿ.ಎಸ್, ಚನ್ನಕೇಶ, ರವಿತೇಜ, ವಿರುಪಣ್ಣ ಢಣಾಪುರ, ರಾಧಾ ಉಮೇಶ, ರಗಡಪ್ಪ ಹೊಸಳ್ಳಿ, ಶಾಮೀದ್ಲಾಠಿ, ಛತ್ರಪ್ಪ ತಂಬೂರಿ, ಕೃಷ್ಣಸಿಂಗ್, ಶಕುಂತಲ ನಾಯಕ, ಮೈಲಾರಪ್ಪ ಬೂದಿಹಾಳ, ಚಿದಂಬರ ಬಡಿಗೇರ, ಶಶಿಕುಮಾರ ಕೆ., ಸಲಾವುದ್ಧೀನ್ ಶಿರಹಟ್ಟಿ, ಮಲ್ಲೇಶಪ್ಪ ಅಂಗಡಿ, ರಾಹುಲ್, ಹರನಾಯಕ, ಕನಕ ಎಚ್. ಹೊಸ್ಕೇರ ಮತ್ತಿತರರು ಕವನ ವಾಚಿಸಿದರು. ಪುಸ್ತಕ ಪ್ರಾಧಿಕಾರ ಸದಸ್ಯ ಅಶೋಕಕುಮಾರ ರಾಯ್ಕರ್, ಕಾವ್ಯಲೋಕ ಗೌರವ ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ, ರಾಜೇಶ ನಾಯಕ, ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಬಸವದಳ ಬ್ಯಾಂಕ್ ಅಧ್ಯಕ್ಷ ಬಸವರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.