ಕೊಪ್ಪಳ: ಪತ್ನಿಯ ಅನೈತಿಕ ಸಂಬಂಧದಿಂದ ರೋಸಿ ಹೋಗಿದ್ದ ತಾಲ್ಲೂಕಿನ ಚಿಕ್ಕ ಸಿಂಧೋಗಿ ಗ್ರಾಮದ ಧನಗುಂಡಿಮಠ ನೀಲಕಂಠಯ್ಯ (45) ಎಂಬುವರು ಭಾನುವಾರ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ನನ್ನ ತಮ್ಮ ಧನಗುಂಡಯ್ಯನ ಹೆಂಡತಿ ಗವಿಸಿದ್ದಮ್ಮ ಹಾಗೂ ಬೇಳೂರು ಗ್ರಾಮದ ವೀರಯ್ಯ ಹಿರೇಮಠ ನಡುವೆ ಅನೈತಿಕ ಸಂಬಂಧವಿತ್ತು. ಈ ಕುರಿತು ನಮ್ಮ ಮನೆಯಲ್ಲಿ ಅನೇಕ ಬಾರಿ ಜಗಳವಾಗಿತ್ತು. ಸಮಸ್ಯೆ ಪರಿಹರಿಸುವುದಾಕ್ಕಾಗಿ ಗವಿಸಿದ್ದಮ್ಮಗೆ ಊರ ಹಿರಿಯರ ಮುಂದೆ ಬುದ್ಧಿವಾದ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಮನನೊಂದು ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೃತನ ಸಹೋದರ ಬಸಯ್ಯ ಧನಗುಂಡಿಮಠ ದೂರಿನಲ್ಲಿ ತಿಳಿಸಿದ್ದಾರೆ. ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.