ADVERTISEMENT

ಕೊಪ್ಪಳ: ಇನ್ನೊಬ್ಬ ಪೊಲೀಸ್‌ ಶೋಧಕ್ಕೆ ಕಾರ್ಯಾಚರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 6:52 IST
Last Updated 7 ಸೆಪ್ಟೆಂಬರ್ 2022, 6:52 IST
   

ಕೊಪ್ಪಳ: ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಬಂದೋಬಸ್ತ್‌ ಕರ್ತವ್ಯ ನಿರ್ವಹಿಸಿ ಮುಂಡರಗಿಗೆ ಹಿಂದಿರುಗುವಾಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಹರಿದಿರುವ ತೊಂಡೆಹಳ್ಳದಲ್ಲಿ ಸೋಮವಾರ ರಾತ್ರಿ ಕೊಚ್ಚಿ ಹೋಗಿದ್ದ ಪೊಲೀಸ್‌ ಕಾನ್‌ಸ್ಟೆಬಲ್ ಮಹೇಶ ವಕ್ಕರದ ಅವರ ಶೋಧ ಕಾರ್ಯ ಬುಧವಾರ ಬೆಳಿಗ್ಗೆ ಮುಂದುವರಿಯಿತು.

ಬೆಳಕಿನ ಕೊರತೆಯಿಂದಾಗ ರಕ್ಷಣಾ ತಂಡಕ್ಕೆ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಕಾರ್ಯಾಚರಣೆ ‌ನಡೆದಿದೆ‌.

ಮುಂಡರಗಿ ಠಾಣೆ ಕಾನ್‌ಸ್ಟೆಬಲ್ ನಿಂಗಪ್ಪ ಹಲವಾಗಲಿ (28) ಅವರ ಶವ ಈಗಾಗಲೇ ಪತ್ತೆಯಾಗಿದ್ದು, ಮಹೇಶ ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಇವರಿಬ್ಬರೂ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಊರಿಗೆ ವಾಪಸ್‌ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.