ADVERTISEMENT

ಕೋಟಿ ವೃಕ್ಷ ನಾಟಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 12:29 IST
Last Updated 10 ಆಗಸ್ಟ್ 2021, 12:29 IST
ಕುಷ್ಟಗಿ ತಾಲ್ಲೂಕು ನವಲಹಳ್ಳಿಯಲ್ಲಿ ನಡೆದ ಕೋಟಿ ವೃಕ್ಷ ಅಭಿಯಾನಕ್ಕೆ ದೇವೇಂದ್ರಪ್ಪ ಬಳೂಟಗಿ ಚಾಲನೆ ನೀಡಿದರು
ಕುಷ್ಟಗಿ ತಾಲ್ಲೂಕು ನವಲಹಳ್ಳಿಯಲ್ಲಿ ನಡೆದ ಕೋಟಿ ವೃಕ್ಷ ಅಭಿಯಾನಕ್ಕೆ ದೇವೇಂದ್ರಪ್ಪ ಬಳೂಟಗಿ ಚಾಲನೆ ನೀಡಿದರು   

ನವಲಹಳ್ಳಿ (ಕುಷ್ಟಗಿ): ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಸೋಮವಾರ ‘ಕೋಟಿ ವೃಕ್ಷ ನಾಟಿ ಅಭಿಯಾನ’ ನಡೆಯಿತು.

ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಸಸಿಗಳಿಗೆ ನೀರೆರೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಅನೇಕ ರೈತರಿಗೆ ಸಸಿಗಳನ್ನು ವಿತರಿಸಲಾಯಿತು.

ADVERTISEMENT

ಕೋಟಿ ವೃಕ್ಷ ಅಭಿಯಾನದ ಕುರಿತು ಜಗದೀಶ ಹಿರೇಮಠ ಮಾಹಿತಿ ನೀಡಿದರು. ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಜಿಲ್ಲಾ ಸಂಯೋಜಕಿ ಭಾಗ್ಯಶ್ರೀ, ರೇಖಾ ಹಿರೇಮಠ, ಬೆಟ್ಟಪ್ಪ, ಪರಶುರಾಮ ಹಾಗೂ ಇತರರು ಇದ್ದರು.

ತಾಲ್ಲೂಕು ಸಂಯೋಜಕ ಬಸವರಾಜ ನಿರೂಪಿಸಿದರು. ಗ್ಯಾನಪ್ಪ ತಳವಾರ ಸ್ವಾಗತಿಸಿದರು. ಬುಡ್ಡನಗೌಡ ತಳವಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.