ADVERTISEMENT

ಕೊಪ್ಪಳ: ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 12:13 IST
Last Updated 17 ಮಾರ್ಚ್ 2021, 12:13 IST
ತಾವರಗೇರಾ ಸಮೀಪದ ಸಂಗನಾಳ ಗ್ರಾಮದ ಕರಗಿನಮಡ್ಡಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಈಚೆಗೆ ಚಾಲನೆ ನೀಡಲಾಯಿತು
ತಾವರಗೇರಾ ಸಮೀಪದ ಸಂಗನಾಳ ಗ್ರಾಮದ ಕರಗಿನಮಡ್ಡಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಈಚೆಗೆ ಚಾಲನೆ ನೀಡಲಾಯಿತು   

ಸಂಗನಾಳ (ತಾವರಗೇರಾ): ‘ಕೂಲಿ ಕಾರ್ಮಿಕರು ನರೇಗಾದ ಸದುಪಯೋಗ ಪಡೆಯಬೇಕು’ ಎಂದು ಸಂಗನಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣಪ್ಪ ಹಂಚಿನಾಳ ಸಲಹೆ ನೀಡಿದರು.

ಸಮೀಪದ ಸಂಗನಾಳ ಗ್ರಾಮದ ಕರಗಿನಮಡ್ಡಿ ಕೆರೆಯಲ್ಲಿ ನರೇಗಾ ಅಡಿ ಕೈಗೆತ್ತಿಕೊಳ್ಳಲಾಗಿರುವ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ಜನ ಕೂಲಿ ಅರಸಿ ಬೇರೆ ಊರುಗಳಿಗೆ ಗುಳೆ ಹೋಗಬಾರದು ಎಂದು ನರೇಗಾದಲ್ಲಿ ಸ್ಥಳೀಯವಾಗಿ ಕೆಲಸ ನೀಡಲಾಗುತ್ತಿದೆ’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಯಮನೂರಪ್ಪ ಪೂಜಾರ, ಸದಸ್ಯರಾದ ಮಹೇಶ ಪಾಟೀಲ, ಶ್ರೀದೇವಿ, ಶರಣಪ್ಪ ಕುರಿತೇಲಿ, ಸಂಗಪ್ಪ ಹವಲ್ದಾರ, ಕರ್ನಟಕ ರೈತ ಸಂಘದ ಜಿಲ್ಲಾ ಘಟಕದ ಉಫಾಧ್ಯಕ್ಷ ದೇವಪ್ಪ ಕಂಬಳಿ ಮತ್ತು ಗ್ರಾ.ಪಂ. ಸಿಬ್ಬಂದಿ, ಕೂಲಿ ಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.