ಕೊಪ್ಪಳ: ತಾಲೂಕಿನ ಬಹದ್ದೂರ ಬಂಡಿಗೆ ಮಂಗಳವಾರ ಹಾತಿರಾಮ್ ಮಹಾರಾಜರ ಸಮಾಧಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್ ಕಾರ್ಯಕರ್ತನಿಂದ ಶೂ ತರಿಸಿ ಹಾಕಿಕೊಂಡ ಘಟನೆ ನಡೆಯಿತು.
ಸಮಾಧಿ ಸ್ಥಾನದ ಸ್ವಲ್ಪ ದೂರದಲ್ಲಿ ಬಿಟ್ಟಿದ್ದ ಶೂಗಳನ್ನು ತರುವಂತೆ ಹಿಂಬಾಲಕರೊಬ್ಬರಿಗೆ ಹೇಳಿದ್ದರಿಂದ ಅವರು ಕೈಯಿಂದ ತಂದು ಸಚಿವರಿಗೆ ಧರಿಸಲು ನೆರವಾದರು.
ಇದು ಕೆಲವರಿಗೆ ಮುಜುಗರ ಉಂಟು ಮಾಡಿದರೆ, ಸ್ಥಳೀಯ ಕಾರ್ಯಕರ್ತರೊಬ್ಬರು 'ಶೂ ಕೈಯಲ್ಲಿ ತೆಗೆದುಕೊಂಡು ಬರುವಂತೆ ಸಚಿವರು ಹೇಳಿಲ್ಲ. ಜಿಟಿಜಿಟಿ ಮಳೆಯಿಂದ ಕೆಸರಾಗಿದ್ದರಿಂದ ಶೂ ತರುವಂತೆ ಬಂಜಾರ ಭಾಷೆಯಲ್ಲಿ ಹಿಂಬಾಲಕರಿಗೆ ಹೇಳಿದರು. ಅವರು ಕೈಯಿಂದ ತಂದು ಕೊಟ್ಟಿದ್ದಾರೆ' ಎಂದು ಸಮಜಾಯಿಷಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.