ಕೊಪ್ಪಳ: ಪತಿಯ ಮೇಲಿನ ಕೋಪದಿಂದ ತನ್ನ 16 ತಿಂಗಳ ಗಂಡು ಮಗುವನ್ನು ತಾಯಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆಸೋಮವಾರ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಅಭಿನವ ಮೃತ ಮಗು. ಕವಿತಾ ಅಲಿಯಾಸ್ ಪ್ರತಿಮಾ (25) ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ವಿವರ: ‘ಪತಿ ಶಶಿಧರ, ಪತ್ನಿ ಕವಿತಾ ಜೊತೆ ಆಗಾಗ್ಗೆ ಜಗಳವಾಗುತ್ತಿತ್ತು. ಅವರುಕೆಲಸಕ್ಕೆಂದು ಹೋದ ನಂತರ ಕವಿತಾ ಈ ಕೃತ್ಯ ನಡೆಸಿದ್ದಾಳೆ. ಶಶಿಧರ ಮನೆಗೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.