ADVERTISEMENT

ಹನುಮಸಾಗರ: ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 15:17 IST
Last Updated 30 ಡಿಸೆಂಬರ್ 2024, 15:17 IST
ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕೊಪ್ಪಳ ಜಿಲ್ಲೆಯ ಹನುಮಸಾಗರದಿಂದ ವಿದ್ಯಾರ್ಥಿಗಳು ಭಾಗವಹಿಸಿ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು
ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕೊಪ್ಪಳ ಜಿಲ್ಲೆಯ ಹನುಮಸಾಗರದಿಂದ ವಿದ್ಯಾರ್ಥಿಗಳು ಭಾಗವಹಿಸಿ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು   

ಹನುಮಸಾಗರ: ಹುಬ್ಬಳ್ಳಿಯಲ್ಲಿ ಆಸ್ಪರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ  ಹನುಮಸಾಗರದ ವಿದ್ಯಾರ್ಥಿಗಳು ಭಾಗವಹಿಸಿ 3 ಚಿನ್ನ, 4 ಬೆಳ್ಳಿ, 5 ಕಂಚು, ಒಟ್ಟು 12 ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಫೆಡರೇಷನ್‌ನ ರಾಜ್ಯ ಕಾರ್ಯದರ್ಶಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

14 ವರ್ಷದ ಪುರುಷರ ವಿಭಾಗದಲ್ಲಿ ವಿನೀತ ಗುಡಿ ಕೋಟಿ, ಕಟಾ ಹಾಗೂ ಗುಮಿತೆ ಕ್ರೀಡೆಯಲ್ಲಿ 1 ಚಿನ್ನ, 1 ಕಂಚು, ಪವನ ನಾಡಗೌಡರ 1 ಚಿನ್ನ, 1 ಬೆಳ್ಳಿ, ಪ್ರಜ್ವಲ ಬದಾಮಿ ಕಟಾಕ್ರೀಡೆಯಲ್ಲಿ 1 ಕಂಚು ಹಾಗೂ ಫೈಟ್‌ನಲ್ಲಿ 1 ಕಂಚು, ಅಭಿಷೇಕ ಕೋರಿ 1 ಬೆಳ್ಳಿ, ರಮೇಶ್ ಬಂಡರಗಲ್ಲ 1 ಕಂಚಿನ ಪದಕವನ್ನು ‌ಪಡೆದುಕೊಂಡಿದ್ದಾರೆ.

17 ವರ್ಷ ವಯೋಮಿತಿ ವಿಭಾಗದಲ್ಲಿ ವಿರಾಜ ಗುಡಿಕೋಟಿ ಫೈಟ್‌ನಲ್ಲಿ 1 ಚಿನ್ನ, ಕಟಾಕ್ರೀಡೆಯಲ್ಲಿ 1 ಬೆಳ್ಳಿ ಮತ್ತು 14 ವರ್ಷ ಮಹಿಳೆಯರ ವಿಭಾಗದಲ್ಲಿ ಶ್ರೇಯಾ ಬಡಿಗೇರ 1 ಬೆಳ್ಳಿ, ರೇಣುಕಾ ವಡ್ಡರ 1 ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಸೇರಿ 8 ರಾಜ್ಯಗಳಿಂದ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.