ADVERTISEMENT

‘ಪೊಗರು’ ನಿರ್ದೇಶಕರ ಮೇಲೆ ಕ್ರಮಕೈಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 11:53 IST
Last Updated 23 ಫೆಬ್ರುವರಿ 2021, 11:53 IST

ಗಂಗಾವತಿ: ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಲಾಗಿದೆ. ಚಿತ್ರದ ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಬ್ರಾಹ್ಮಣ ಸಮಾಜದ ಮುಖಂಡ ಪ್ರಲ್ಹಾದ್‌ ರಾವ್ ಹೇರೂರು ಒತ್ತಾಯಿಸಿದ್ದಾರೆ.

‘ಪೊಗರು ಚಿತ್ರದಲ್ಲಿ ಅರ್ಚಕರ ಮೇಲೆ ಕಾಲಿಟ್ಟು ಅವರನ್ನು ಅವಮಾನಿಸಲಾಗಿದೆ. ಇದರಿಂದ ಬ್ರಾಹ್ಮಣ ಸಮಾಜಕ್ಕೆ ನೋವು ಉಂಟಾಗಿದೆ. ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ತಲೆ ಮೇಲೆ ಕಾಲಿಡುವ ದೃಶ್ಯಗಳಲ್ಲದೆ, ದೇವಸ್ಥಾನಕ್ಕೆ ಮಡಿ ನೀರು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮತ್ತು ಹೋಮ-ಹವನಗಳ ಕುಂಡಲಗಳನ್ನು ಧ್ವಂಸಗೊಳಿಸುವ ದೃಶ್ಯಗಳು ನೋವುಂಟು ಮಾಡುತ್ತವೆ’ ಎಂದು ಹೇಳಿದರು.

ADVERTISEMENT

ಕೂಡಲೇ ನಿರ್ದೇಶಕರು ಚಿತ್ರದಲ್ಲಿರುವ ಅಪಮಾನಕರ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.