
ಪ್ರಜಾವಾಣಿ ವಾರ್ತೆ
ಬಂಕಾಪುರ (ಕನಕಗಿರಿ): ಸಮೀಪದ ಬಂಕಾಪುರ ಗ್ರಾಮದ ರೈತ ನಜೀರಸಾಬ ಅವರ ಪುತ್ರಿ ಹುಸೇನಬೀ ಅವರು ಬಿ.ಇಡಿ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಪಡೆದಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಗಂಗಾವತಿಯ ಟಿಎಂಎಈ ಸಂಸ್ಥೆಯ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹುಸೇನಬೀ ಅವರು 2,400 ಅಂಕಗಳಿಗೆ 2087 ಅಂಕಗಳನ್ನು (ಶೇ 86.96) ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.