ಹನುಮಸಾಗರ: ಸಮೀಪದ ಗಡಚಿಂತಿ ಗ್ರಾಮದಲ್ಲಿ ಮಾರುತೇಶ್ವರ ಹಾಗೂ ಈಶ್ವರ ಜಾತ್ರೆ ಪ್ರಯುಕ್ತ ಭಾನುವಾರ ಸಂಜೆ ಉಚ್ಛಾಯ ಉತ್ಸವ ಅದ್ದೂರಿಯಾಗಿ ಜರುಗಿತು.
ದೇವಸ್ಥಾನದಲ್ಲಿ ರುದ್ರಾಭಿಷೇಕ, ಉತ್ಸವ ಮೂರ್ತಿ ಮೆರವಣಿಗೆ ಹಾಗೂ ಮಂಗಳಾರತಿ ಕಾರ್ಯಕ್ರಮ ನಡೆಯಿತು.
ರಂಗರಾವ್ ಗೌಡ್ರ ಮನೆಯಲ್ಲಿ ಕಳಸಕ್ಕೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮೆರವಣಿಗೆಯೊಂದಿಗೆ ಉಚ್ಚಾಯದ ಕಳಸ ತರಲಾಯಿತು.
ಹಾಬಲಕಟ್ಟಿ, ಮಾಲಗಿತ್ತಿ, ಹನುಮಸಾಗರ, ವಾರಿಕಲ್, ಹಿರೇಗೊಣ್ಣಾಗರ ಹಾಗೂ ಮಸರಕಲ್ ಗ್ರಾಮದ ಜನ ಸೇರಿದ್ದರು.
ಮುಖಂಡರಾದ ಎ.ಕೆ.ಪಾಟೀಲ, ಅನಂತರಾವ್ ಪಾಟೀಲ, ರಂಗರಾವ್ ಪಾಟೀಲ, ಹನುಮಪ್ಪ ರೋಣದ, ಯಮನಪ್ಪ, ಶರಣಪ್ಪ ಯರಗೇರಾ, ಹನುಮಪ್ಪ ವಾಲೀಕಾರ, ಪರಸಪ್ಪ, ವೆಂಕಟೆಶ ಕಬ್ಬರಗಿ, ಲಂಕೇಶ ಗುಡದೂರ, ಯಮನಪ್ಪ ದಳಪತಿ, ಬಾಲಪ್ಪ ನಾಗರಾಳ, ವೆಂಕಟೇಶ ಕಬ್ಬೇರ, ಹರೀಶಗೌಡ್ರ, ಲಂಕೇಶ, ಯಮನಪ್ಪ ಅಬ್ಬಿಗೇರಿ, ಬಾಲಪ್ಪ ನಾಗರಾಳ, ಯರಿಗೇರಿ ಹಾಗೂ ಮಹಾಂತೇಶ ಬೇಲೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.