ADVERTISEMENT

ಕೊಪ್ಪಳ | ಯೂರಿಯಾ ರಸಗೊಬ್ಬರ ಕೊರತೆ: ಬಿಜೆಪಿ ರೈತ ಮೋರ್ಚಾ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 18:15 IST
Last Updated 27 ಜುಲೈ 2025, 18:15 IST
<div class="paragraphs"><p>ಬಿಜೆಪಿ ಧ್ವಜ</p></div>

ಬಿಜೆಪಿ ಧ್ವಜ

   

ಕೊಪ್ಪಳ: ಸಕಾಲದಲ್ಲಿ ಯೂರಿಯಾ ರಸಗೊಬ್ಬರ ಸಿಗದ ಕಾರಣಕ್ಕೆ ನಗರದಲ್ಲಿ ಶನಿವಾರ ರೈತ ಮಣ್ಣು ತಿಂದಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರವಾರು ಹೋರಾಟ ನಡೆಸುವ ಯೋಜನೆ ರೂಪಿಸಲು ಸೋಮವಾರ ನಗರದ ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಂಡಿದೆ. 

‘ಬಿಜೆಪಿ ರೈತ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಮುಂದಾಳತ್ವದಲ್ಲಿ ಸಭೆ ನಡೆಸಿ ಹೋರಾಟದ ಯೋಜನೆ ರೂಪಿಸಲಾಗುತ್ತದೆ. ಅನ್ನ ಕೊಡುವ ರೈತನ ಕೈಗೆ ಸರ್ಕಾರ ಈಗ ಮಣ್ಣು ನೀಡಿದೆ’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.