ADVERTISEMENT

ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ವಾರಿ ಫೇಸ್ಟಿವಲ್’ಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 5:58 IST
Last Updated 12 ಡಿಸೆಂಬರ್ 2022, 5:58 IST
ಶ್ರೀನಿವಾಸ ಎಣ್ಣಿ
ಶ್ರೀನಿವಾಸ ಎಣ್ಣಿ   

ಗಂಗಾವತಿ: ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನ ಫೋಟೋಗ್ರಾಫಿಕ್ ಅಸೋಶಿಯೇಷನ್ ಆಫ್ ಕೂಚ್‌ಬೆಹರ್ ಆಯೋಜಿಸಿದ್ದ ಎಕ್ಸ್‌ಪೋಶರ್-2022 ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.

ಸ್ಪರ್ಧೆಯಲ್ಲಿ ಒಟ್ಟು 4 ವಿಭಾಗಗಳಿದ್ದು, ಟ್ರಾವೆಲ್ ವಿಭಾಗದ ‘ವಾರಿ ಫೇಸ್ಟಿವಲ್’ ಎಂಬ ಶೀರ್ಷಿಕೆಗೆ ಚಿನ್ನದ ಪದಕ ದೊರೆತಿದೆ. 26 ದೇಶಗಳಿಂದ 125 ಸ್ಪರ್ಧಿಗಳು ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಛಾಯಾ ಚಿತ್ರಗಾರ ವಿಕ್ಕುಮ್ ಸೇನಾ ನಾಯಕೇ (ಶ್ರೀಲಂಕಾ), ಅಹಮ್ಮದ್ ಮೋಹ‌ಮ್ಮದ್ ಹಸನ್(ಈಜಿಪ್ಟ್), ಬಿ.ಕೆ.ಎನ್.ಸಿನ್ಹಾ (ಭಾರತ) ಅವರು ತೀರ್ಪುಗಾರರಾಗಿದ್ದರು.

ADVERTISEMENT

ಶ್ರೀನಿವಾಣ ಎಣ್ಣಿ ಪ್ರಸ್ತುತ
ಗಂಗಾವತಿ ಕೆಪಿಟಿಸಿಎಲ್‌ನಲ್ಲಿ ಕಿರಿಯ ಅಭಿಯಂತರ ರಾಗಿ ಕೆಲಸ ಮಾಡುತ್ತಿದ್ದು, ಕಳೆದ 6 ವರ್ಷಗಳಿಂಗ ಹವ್ಯಾಸಿ ಛಾಯಾಗ್ರಾಹ ಕರಾಗಿ ತೆಗೆದ ಛಾಯಾಚಿತ್ರಗಳು 30ಕ್ಕೂ ಹೆಚ್ಚು ದೇಶಗಳಲ್ಲಿ
ಪ್ರದರ್ಶನಗೊಂಡಿವೆ.

ಇವರಿಗೆ ಚಿನ್ನದ ಪದಕ ಸೇರಿ ಈವರೆಗೆ 100ಕ್ಕೂ ಹೆಚ್ಚು ಬೆಳ್ಳಿ, ಕಂಚಿನ ಪದಕಗಳು ಹುಡಿಕೊಂಡು ಬಂದಿವೆ. ಇವರ ಛಾಯಾಚಿತ್ರಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆ, ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.